ಕಠಿಣ ಶ್ರಮವಹಿಸಿ ಅಭ್ಯಾಸ ಮಾಡಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದರೆ ಅವರ ಪ್ರಾಥಮಿಕ ಶಿಕ್ಷಣದ ತಳಪಾಯ ಗಟ್ಟಿಯಾಗಿರಬೇಕು. ವಿದ್ಯಾರ್ಥಿಗಳು ಕಠಿಣ ಶ್ರಮವಹಿಸಿ ಅಭ್ಯಾಸ ಮಾಡಬೇಕು. ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾದಿಕಾರಿ ವ್ಹಿ.ವ್ಹಿ. ನಡುವಿನಮನಿ ಹೇಳಿದರು.

Advertisement

ಅವರು ತಾಲೂಕಿನ ಹಂಗನಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದ್ವಿತೀಯ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡುತ್ತ, ಮಕ್ಕಳು ಮೊಬೈಲ್‌ನಿಂದ ದೂರವಿದ್ದು, ಅಭ್ಯಾಸ ಮತ್ತು ಪಠ್ಯೇತರ ಚಟುವಟಿಕೆಗಳ ಕಡೆ ಗಮನ ಕೊಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಮ್‌ಸಿ ಅಧ್ಯಕ್ಷ ಶರಣಪ್ಪ ಕಿತ್ಲಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವ್ಹಿ.ಎಮ್. ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ಕ.ರಾ.ಸ.ನೌ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಕೆ.ಬಿ. ಕೊಣ್ಣೂರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಕಾರ್ಯದರ್ಶಿ ಎನ್.ಎಚ್.ಪಿ ಈರಪ್ಪ, ಎಫ್.ಎಸ್. ಗಾಣಗೇರ, ಸೊರಟೂರ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಕೆ.ಬಿ. ಕಾತರಕಿ, ನಿವೃತ್ತ ಶಿಕ್ಷಕ ಬಿ.ವಿ. ಪಾಟೀಲ್, ಎಚ್.ಎಮ್. ಪಲ್ಲೇದ, ವಿ.ಎಮ್. ಪೂಜಾರ, ಎಸ್.ಎಚ್. ಪಾಟೀಲ್, ಪಿ.ಎನ್. ಕಾಳೆ, ವಿ.ಎಂ. ಪಾಟೀಲ್, ಈಶ್ವರಪ್ಪ ಗದ್ದಿ, ಉದಯಕುಮಾರ ಗದ್ದಿ, ಮಹಾಲಿಂಗಪ್ಪ ಛಬ್ಬಿ, ಗ್ರಾ.ಪಂ ಸದಸ್ಯರಾದ ಗಂಗಮ್ಮ ಗಂಟಿ, ಬಸವರಾಜ ಖಾನಾಪುರ, ಹಿರಿಯರಾದ ಪ್ರಭಯ್ಯ ಹಿರೇಮಠ, ಈರಣ್ಣ ಗದ್ದಿ, ಎಸ್‌ಡಿಎಮ್‌ಸಿ ಸರ್ವ ಸದಸ್ಯರು ಇದ್ದರು.

ಪ್ರಧಾನ ಗುರುಗಳಾದ ಎಚ್.ವೈ. ಕೊಂಡಿಕೊಪ್ಪ ಸ್ವಾಗತಿಸಿದರು. ಅರವಿಂದ ತಳವಾರ, ಕವಿತಾ ಬಾಗೇವಾಡಿ, ಬಸವರಾಜ ಹೇಳವಿ ನಿರುಪಿಸಿದರು. ಎಮ್.ಜಿ. ರಾಠೋಡ ವಂದಿಸಿದರು.


Spread the love

LEAVE A REPLY

Please enter your comment!
Please enter your name here