ಮಂಡ್ಯ:- ಇಂಜಿನಿಯರ್ ಗಳಿಗೆ ಹೆಚ್ಚು ಸಂಬಳ ಏನೋ ಸಿಗತ್ತೆ. ಆದರೆ ಅವರ ವರ್ಕ್ ಪ್ರೆಶರ್ ನೋಡಿದ್ರೆ ಬೇಡಪ್ಪ ಅನ್ಸತ್ತೆ. ಎಸ್ ಇದೀಗ ವರ್ಕ್ ಪ್ರೆಷರ್ ನಿಂದ ಇಂಜಿನಿಯರ್ ಓರ್ವರು ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ.
Advertisement
ಮೃತ ಜ್ಞಾನೇಶ್ ಶಿಂಷಾ ಏತ ನೀರಾವರಿ ಯೋಜನೆಯನಲ್ಲಿ ಕಳೆದ 5 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆತ್ಮಹತ್ಯೆಗೂ ಮುನ್ನ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ʼWork Pressureʼ ಎಂದು ಹಾಕಿಕೊಂಡಿದ್ದ. ಈ ಹಿನ್ನೆಲೆ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.