ನವದೆಹಲಿ: ಮಹಾ ಕುಂಭ ಮೇಳದ ಜನಸಂದಣಿಯನ್ನು ನೋಡಿ ಜಗತ್ತು ಅಚ್ಚರಿಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಮೋದಿ, ಒಂದೇ ನದಿಯ ದಡದಲ್ಲಿ, ತ್ರಿವೇಣಿ ಸಂಗಮದಲ್ಲಿ, ಕೋಟ್ಯಂತರ ಸಂಖ್ಯೆಯಲ್ಲಿ ಜನರು ಹೇಗೆ ಒಟ್ಟುಗೂಡಿದರು ಎಂಬುದನ್ನು ನೋಡಿ ಇಡೀ ಜಗತ್ತು ಆಶ್ಚರ್ಯಚಕಿತವಾಗಿದೆ.
ಈ ಕೋಟ್ಯಂತರ ಜನರಿಗೆ ಔಪಚಾರಿಕ ಆಹ್ವಾನವೂ ಇರಲಿಲ್ಲ ಅಥವಾ ಅವರು ಯಾವ ಸಮಯಕ್ಕೆ ಬರಬೇಕೆಂಬುದರ ಬಗ್ಗೆ ಯಾವುದೇ ಪೂರ್ವ ಮಾಹಿತಿಯೂ ಇರಲಿಲ್ಲ. ಹೀಗೆ ಜನರು ಮಹಾ ಕುಂಭಕ್ಕೆ ಹೊರಟರು. ಮತ್ತು ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿ ಆಶೀರ್ವಾದ ಪಡೆದರು.
ಆ ಚಿತ್ರಗಳನ್ನು ನಾನು ಮರೆಯಲು ಸಾಧ್ಯವಿಲ್ಲ ಸ್ನಾನದ ನಂತರ ಅಪಾರ ಸಂತೋಷ ಮತ್ತು ತೃಪ್ತಿಯಿಂದ ತುಂಬಿದ ಆ ಮುಖಗಳನ್ನು ನಾನು ಮರೆಯಲು ಸಾಧ್ಯವಿಲ್ಲ. ಮಹಿಳೆಯರು, ವೃದ್ಧರು ಅಥವಾ ದಿವ್ಯಾಂಗರು, ಎಲ್ಲರೂ ಸಂಗಮಕ್ಕೆ ಬಂದಿದ್ದರು ಎಂದು ಮೋದಿ ಹೇಳಿದ್ದಾರೆ.
ಮಹಾಕುಂಭ ಮೇಳದ ನಂತರ, ಪ್ರಧಾನಿ ಮೋದಿ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯಕ್ಕೆ ಭೇಟಿ ನೀಡುವುದಾಗಿ ಘೋಷಿಸಿದರು. ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಾ, ಎಲ್ಲಾ ಭಾರತೀಯರ ಯೋಗಕ್ಷೇಮ ಮತ್ತು ಏಕತೆಗಾಗಿ ಪ್ರಾರ್ಥಿಸುವ ಬಯಕೆಯನ್ನು ಅವರು ವ್ಯಕ್ತಪಡಿಸಿದರು.