ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಹುಲಕೋಟಿಯ RMSS ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಶುಶ್ರೂಷಕರ ದಿನಾಚರಣೆಯ ಅಂಗವಾಗಿ ಸ್ಟಾರ್ ಹೆಲ್ತ್ ಅಕಾಡೆಮಿ ವತಿಯಿಂದ ಪ್ರಥಮ ಚಿಕಿತ್ಸಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ಟಾರ್ ಹೆಲ್ತ್ ಅಕಾಡೆಮಿಯ ಶಶಿಕುಮಾರ ಎಚ್.ಎಸ್., ತುರ್ತು ವೈದ್ಯಕೀಯ ಸೇವೆಯ ಕುರಿತು ಸವಿವರ ಮಾಹಿತಿ ನೀಡಿದರು. ಕಾರ್ಡಿಯಾಕ್ ಅರೆಸ್ಟ್ ಮತ್ತು ಹೃದಯಾಘಾತಕ್ಕಿರುವ ವ್ಯತ್ಯಾಸ, ಹಾವು ಕಡಿತಕ್ಕೆ ಒಳಪಟ್ಟ ವ್ಯಕ್ತಿ, ವಿಷ ಸೇವಿಸಿದ ವ್ಯಕ್ತಿಯ ದೇಹದಿಂದ ವಿಷವನ್ನ ಹೊರತೆಗೆಯಲು ಪ್ರಥಮವಾಗಿ ಹೇಗೆ ಚಿಕಿತ್ಸಿಸಬೇಕು ಎಂದು ಸವಿವರವಾಗಿ ಅರ್ಥೈಸಿದರು. ಸಿಬ್ಬಂದಿಗಳಾದ ರವಿಕುಮಾರ, ವಿವೇಕ ಪ್ರಥಮ ಚಿಕಿತ್ಸೆಯ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಆರ್. ನಾಗನೂರ ತಮ್ಮ ಅನುಭವವನ್ನು ಹಂಚಿಕೊಂಡರು.
ಸಹಾಯಕ ಪ್ರಾಧ್ಯಾಪಕ ಸ್ಟೀಫನ್ ಜಾನ್, ವಿದ್ಯಾಧರ ಗೌರಮ್ಮ ಕಾರ್ಯಾಗಾರದ ಕುರಿತು ಅಭಿನಂದನೆ ವ್ಯಕ್ತಪಡಿಸಿದರು. RMSS ಕಾಲೇಜಿನ ಪ್ರಾಂಶುಪಾಲ ಬಸಯ್ಯ ಹಿರೇಮಠ, ಸಹ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿದ್ದರು.