ಬೆಂಗಳೂರು: ಯಡಿಯೂರಪ್ಪ ಕೆಳಮಟ್ಟದ ರಾಜಕೀಯ ಮಾಡಿ, ಕೊನೆ ದಿನಗಳನ್ನು ಎಣಿಸುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕೆಳಮಟ್ಟದ ರಾಜಕೀಯ ಮಾಡಿ, ಕೊನೆ ದಿನಗಳನ್ನು ಎಣಿಸುತ್ತಿದ್ದಾರೆ.
ತಾನು ಸಾಯೋ ಮುಂಚೆ ವಿಜಯೇಂದ್ರನನ್ನು ಸಿಎಂ ಮಾಡೋದು ಅವರ ಆಸೆಯಾಗಿದೆ. ಹೀಗಾಗಿ ತಮ್ಮ ಮಗನ ರಕ್ಷಣೆಗಾಗಿ ಭಾಗಿಯಾಗಿದ್ದಾರೆ. ಜಗತ್ತಿನಲ್ಲಿಯೂ ಆಸ್ತಿ ಮಾಡೋಕೆ ಈ ಹೋರಾಟವನ್ನು ಯಡಿಯೂರಪ್ಪ, ವಿಜಯೇಂದ್ರ ಮಾಡುತ್ತಿದ್ದಾರೆ. ರೈತರು, ಬಡವರ ಪರವಾಗಿ ಯಡಿಯೂರಪ್ಪ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ತನ್ನ ಮಗನ ಕುರ್ಚಿ ಗಟ್ಟಿ ಮಾಡೋಕೆ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಕ್ಪ್ ಬಿಲ್ ಪಾಸ್ ವಿಚಾರವಾಗಿ, ಮೋದಿ, ಅಮಿತ್ ಶಾಗೆ ಧನ್ಯವಾದ ಹೇಳುತ್ತೇನೆ. ವಕ್ಫ್ ಬಿಲ್ ಪಾಸ್ ಆಗಿದೆ. ಕರಾಳ ಬಿಲ್ ಇವತ್ತು ತಿದ್ದುಪಡಿ ಆಗಿದೆ. ವಿಜಯೇಂದ್ರ ಚೇಲಾಗಳಿಲ್ಲದೇ ನಾವು ರಾಜ್ಯ ಸುತ್ತಿ ದಾಖಲಾತಿ ಸಂಗ್ರಹ ಮಾಡಿದ್ದೆವು. ರಾಜ್ಯಸಭೆಯಲ್ಲಿ ಬಿಲ್ ಪಾಸ್ ಆಗುತ್ತದೆ. ವಕ್ಫ್ ತಿದ್ದುಪಡಿಯನ್ನು ಸ್ವಾಗತ ಮಾಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.