HomeGadag Newsಯೋಗ ಪಾಠಶಾಲೆಗೆ `ಉತ್ತಮ ತಂಡ’ ಪ್ರಶಸ್ತಿ

ಯೋಗ ಪಾಠಶಾಲೆಗೆ `ಉತ್ತಮ ತಂಡ’ ಪ್ರಶಸ್ತಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಯೋಗ ಫೆಡರೇಶನ್ ಆಫ್ ಇಂಡಿಯಾ ಪಂಚಕುಲ (ಹರಿಯಾಣ) ಇವರ ಸಂಯೋಜನೆಯಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಬೆಂಗಳೂರು ಇವರು ಶ್ರೀ ಗುರುಕುಲ ಯೋಗ ವಿದ್ಯಾ ಕೇಂದ್ರ ಸಾಗರ ಇವರ ನಿರ್ವಹಣೆಯಲ್ಲಿ, ಶಿವಮೊಗ್ಗ ಜಿಲ್ಲಾ ಅಮೆಚೂರ್ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಶನ್ ಮತ್ತು ಉಚಿತ ಕಾನೂನು ನೆರವು ಸಮಿತಿ ಸಾಗರ ಇವರ ಸಹಭಾಗಿತ್ವದಲ್ಲಿ ಸಾಗರದ ಈಡಿಗರ ಸಮುದಾಯ ಭವನದಲ್ಲಿ ನಡೆಸಿದ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಗದುಗಿನ ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ತಂಡವು ಭಾಗವಹಿಸಿ ಉತ್ತಮ ತಂಡ ಪ್ರಶಸ್ತಿ ಪಡೆದಿದೆ.

ತಂಡದ ಸದಸ್ಯರಲ್ಲಿ ವೆಂಕಟೇಶ ಹಾಲನ್ನವರ (12-14 ವರ್ಷದ ಬಾಲಕರ ವಿಭಾಗ) ತೃತೀಯ ಸ್ಥಾನ, ಸಂಜನಾ ಸಜ್ಜನರ (21-25 ವರ್ಷದ ಮಹಿಳೆಯರ ವಿಭಾಗ) 4ನೇ ಸ್ಥಾನ, ಯಶವಂತ ಮತ್ತೂರ (35-45 ವರ್ಷ ಪುರುಷರ ವಿಭಾಗ) ಪ್ರಥಮ ಸ್ಥಾನ, ಜಯಶ್ರೀ ಡಾವಣಗೇರಿ (50-60 ವರ್ಷದ ಮಹಿಳೆಯರ ವಿಭಾಗ) 5ನೇ ಸ್ಥಾನ, ಕೆ.ಎಸ್. ಪಲ್ಲದ (30 ವರ್ಷ ಮೇಲ್ಪಟ್ಟು ತೀರ್ಪುಗಾರರ ಪುರುಷರ ವಿಭಾಗ) ತೃತೀಯ ಸ್ಥಾನ ಗಳಿಸಿ ಯೋಗ ಪಾಠಶಾಲೆ ಮತ್ತು ಗದಗ ಜಿಲ್ಲಾ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಮತ್ತು ಯೋಗ ಪಾಠಶಾಲೆ ತಂಡ ಪ್ರಶಸ್ತಿ ಪಡೆಯಲು ಶ್ರಮಿಸಿದ ಮಹನೀಯರೆಲ್ಲರಿಗೂ ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಮಹಾಪೋಷಕರು ಹಾಗೂ ಅಧ್ಯಕ್ಷರಾದ ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು, ಮ್ಯಾನೇಜರ್ ಎಂ.ಎಸ್. ಅಂಗಡಿ, ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ, ಗದಗ ಜಿಲ್ಲಾ ಯೋಗ ಒಕ್ಕೂಟ, ಗದಗ ಜಿಲ್ಲಾ ಅಮೇಚೂರ್ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಶನ್ ಗದಗ ಮತ್ತು ಯೋಗ ಬಾಂಧವರು, ಅಭಿಮಾನಿ ಸದಸ್ಯರೆಲ್ಲರೂ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!