ಯೋಗೇಶ್ವರ್ 16 ಕೆರೆಗಳಿಗೆ ನೀರು ತುಂಬಿಸಿದ್ದಾರೆ ಆದ್ರೆ HDK ನೂರಾರು ಕೆರೆಗಳಿಗೆ ನೀರು ತುಂಬಿಸಿದ್ದಾರೆ: ಎ ಮಂಜು

0
Spread the love

ಮಂಡ್ಯ: ಸಿಪಿ ಯೋಗೇಶ್ವರ್ 16 ಕೆರೆಗಳಿಗೆ ನೀರು ತುಂಬಿಸಿದ್ದಾರೆ ಆದ್ರೆ ಹೆಚ್ ಡಿ ಕುಮಾರಸ್ವಾಮಿ ನೂರಾರು ಕೆರೆಗಳಿಗೆ ನೀರು ತುಂಬಿಸಿದ್ದಾರೆ  ಎಂದು ಜೆಡಿಎಸ್ ಶಾಸಕ ಎ ಮಂಜು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ಕೆರೆಗಳನ್ನು ತುಂಬಿಸಿದ ಬಗ್ಗೆ ಹೆಚ್ಚು ಚರ್ಚೆಯಾಗಿದೆ,

Advertisement

ಇದೇ ಹಿನ್ನೆಲೆಯಲ್ಲಿ ತಾವು ಒಂದು ಸಮೀಕ್ಷೆ ಮಾಡಿದ್ದು ಅದರ ಪ್ರಕಾರ ಸಿಪಿ ಯೋಗೇಶ್ವರ್ 16 ಕೆರೆಗಳಿಗೆ ನೀರು ತುಂಬಿಸಿದ್ದಾರೆ ಅದರೆ ಹೆಚ್ ಡಿ ಕುಮಾರಸ್ವಾಮಿ ನೂರಾರು ಕೆರೆಗಳಿಗೆ ನೀರು ತುಂಬಿಸಿದ್ದಾರೆ,  ಅದಕ್ಕಿಂತಲೂ ಮುಖ್ಯವಾಗಿ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ಇಗ್ಲೂರ್ ಜಲಾಶಯವನ್ನು ನಿರ್ಮಿಸಲಾಯಿತು,

ಆಗ ರಾಜ್ಯದ ಮುಖ್ಯಮಂತ್ರಿ ಜೆಹೆಚ್ ಪಟೇಲ್ ಆಗಿದ್ದರು ಮತ್ತು ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು ಎಂದು ಜೆಡಿಎಸ್ ಶಾಸಕ ಎ ಮಂಜು ಹೇಳಿದರು. ಇನ್ನೂ ಮಾಜಿ ಪ್ರಧಾನಿ ದೇವೇಗೌಡರನ್ನು ತಾನು ವಿರೋಧಿಸಿದಷ್ಟು ಯಾರೂ ವಿರೋಧಿಸಿಲ್ಲ, ಆದರೆ ತನ್ನ ವಿರೋಧ ವಿಷಯಾಧಾರಿತವಾಗಿರುತಿತ್ತು, ಯಾವತ್ತೂ ವೈಯಕ್ತಿಕ ಟೀಕೆಗಳನ್ನು ಮಾಡಿಲ್ಲ, ಸಿದ್ದರಾಮಯ್ಯರನ್ನೂ ತಾನು ವೈಯಕ್ತಿಕವಾಗಿ ಟೀಕಿಸಿಲ್ಲ ಎಂದರು.

 


Spread the love

LEAVE A REPLY

Please enter your comment!
Please enter your name here