ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ ಮತ್ತು ಗಿಲ್ಲಿ ನಡುವಿನ ಸಂಬಂಧ ಮತ್ತೆ ಬಿಗಡಾಯಿಸಿದೆ. ಡಿಸೆಂಬರ್ 19ರ ಎಪಿಸೋಡ್ನಲ್ಲಿ ನಡೆದ ಘಟನೆಗಳು, ಇವರಿಬ್ಬರ ನಡುವಿನ ಅಂತರ ಇನ್ನಷ್ಟು ಹೆಚ್ಚಾಗಿದೆ ಎಂಬುದನ್ನು ತೋರಿಸಿವೆ. ಕಾವ್ಯಾ ನೀಡಿದ ಗಂಭೀರ ಎಚ್ಚರಿಕೆಯನ್ನು ಗಿಲ್ಲಿ ಲಘುವಾಗಿ ತೆಗೆದುಕೊಂಡಿರುವುದು ಮನೆಮಂದಿಯಲ್ಲೂ, ಪ್ರೇಕ್ಷಕರಲ್ಲೂ ಚರ್ಚೆಗೆ ಕಾರಣವಾಗಿದೆ.
ಆರಂಭದಲ್ಲಿ ಜಂಟಿಯಾಗಿ ಆಡಿದ್ದ ಕಾವ್ಯಾ–ಗಿಲ್ಲಿ ಜೋಡಿ, ಪರಸ್ಪರ ಬೆಂಬಲದ ಮೂಲಕ ಗಮನ ಸೆಳೆದಿತ್ತು. ಆದರೆ, ದಿನ ಕಳೆದಂತೆ ಗಿಲ್ಲಿ ಅವರ ವರ್ತನೆ ಕಾವ್ಯಾಗೆ ಅಸಮಾಧಾನ ಮೂಡಿಸಿದೆ. ಹಲವು ಬಾರಿ ತಿದ್ದಿಕೊಳ್ಳುವಂತೆ ಹೇಳಿದರೂ, ಗಿಲ್ಲಿ ತಮ್ಮ ನಿಲುವಿನಲ್ಲಿ ಬದಲಾವಣೆ ತೋರಿಸಿಲ್ಲ ಎಂಬ ಆರೋಪ ಕಾವ್ಯಾರದು.
ಡಿಸೆಂಬರ್ 19ರ ಎಪಿಸೋಡ್ನಲ್ಲಿ, ಏರು ಧ್ವನಿಯಲ್ಲಿ ಮಾತನಾಡಿದ ವಿಚಾರದ ಬಗ್ಗೆ ಗಿಲ್ಲಿ ಚಾಕೋಲೇಟ್ ಮೂಲಕ ಇತರ ಸ್ಪರ್ಧಿಗಳಿಗೆ ಸಂದೇಶ ನೀಡಬೇಕಿತ್ತು ಎಂದು ಹೇಳಿದ್ದು, ಇದಕ್ಕೆ ಕಾವ್ಯಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಗಿಲ್ಲಿ ಕೈ ನೀಡಲು ಯತ್ನಿಸಿದ ಸಂದರ್ಭದಲ್ಲಿಯೂ ಕಾವ್ಯಾ ಅದನ್ನು ನಿರಾಕರಿಸಿದ್ದು, ಇಬ್ಬರ ನಡುವಿನ ತಣಿವು ಸ್ಪಷ್ಟವಾಗಿ ಕಾಣಿಸಿಕೊಂಡಿತು.
ಇದೇ ವೇಳೆ, ಗಿಲ್ಲಿ ಮೊಟ್ಟೆ ತೆಗೆದುಕೊಳ್ಳಲು ಮುಂದಾದಾಗ ಕಾವ್ಯಾ ಕೋಪಗೊಂಡು ಮಾನ-ಮರ್ಯಾದೆ ಮತ್ತು ಸ್ವಾಭಿಮಾನ ಕುರಿತು ಕಠಿಣ ಮಾತುಗಳನ್ನು ಆಡಿದ್ದಾರೆ. ಇದಕ್ಕೆ ಗಿಲ್ಲಿ ಶಾಂತವಾಗಿಯೇ ಪ್ರತಿಕ್ರಿಯಿಸಿದ್ದು, “ನನಗೆ ಮಾನ-ಮರ್ಯಾದೆ ಇದೆ” ಎಂದು ಹೇಳಿದ್ದಾರೆ. ಈ ಘಟನೆಯ ಬಳಿಕ ಕಾವ್ಯಾ–ಗಿಲ್ಲಿ ನಡುವಿನ ಸಮೀಕರಣ ಯಾವ ದಿಕ್ಕಿಗೆ ಹೋಗಲಿದೆ ಎಂಬ ಕುತೂಹಲ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.



