ಬೆಂಗಳೂರು: ಪಾಳು ಬಿದ್ದ ಕಟ್ಟಡದಿಂದ ಬಿದ್ದು ಯುವಕ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಮಾರತ್ತಹಳ್ಳಿ ಸಮೀಪದ ದೊಡ್ಡನೆಕ್ಕುಂದಿಯಲ್ಲಿ ನಡೆದಿದೆ. ರಾಯಚೂರು ಮೂಲದ ಪ್ರಕಾಶ್(19) ಮೃತ ದುರ್ಧೈವಿಯಾಗಿದ್ದು,
Advertisement
ಮೃತ ಯುವಕ ಪ್ರಕಾಶ್ನ ತಂದೆ ಚಾಲಕರಾಗಿದ್ದು, ತಾಯಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ಹಿಂದೆಯೂ ಅಪಘಾತವಾಗಿ ಪ್ರಕಾಶ್ ಕಾಲಿಗೆ ಪೆಟ್ಟಾಗಿತ್ತು. ಔಟರ್ ರಿಂಗ್ ರಸ್ತೆ ಪಕ್ಕದಲ್ಲಿ ದೊಡ್ಡದಾದ ಮಾಲ್ ಒಂದು ನಿರ್ಮಾಣವಾಗುತ್ತಿತ್ತು.
ಆದರೆ ಕಾರಣಾಂತರದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಅದೇ ಕಟ್ಟಡದ ಮೇಲಿಂದ ಯುವಕ ಬಿದ್ದು ಸಾವನ್ನಪ್ಪಿದ್ದಾನೆ.ಸದ್ಯ ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.