ಬೆಂಗಳೂರು : ಅದೊಂದು ಖತರ್ನಾಕ್ ಗ್ಯಾಂಗ್. ಆಂದ್ರ ಮೂಲದ ನಿರುದ್ಯೋಗ ಯುವಕ , ಯುವತಿಯರನ್ನೇ ಟಾರ್ಗೆಟ್ ಮಾಡ್ತಿದ್ರು. ಕೆಲಸ ಕೊಡಿಸ್ತೀವಿ ಅಂತಾ ಲಕ್ಷ ಲಕ್ಷ ಹಣ ಪೀಕಿ ಪರಾರಿಯಾಗಿದ್ರು. ಅದೇ ಗ್ಯಾಂಗ್ ಈಗ ಪೊಲೀಸರ ಬಲೆಗೆ ಬಿದ್ದಿದ್ದೆ. ಹೌದು ಕೆಲಸ ಕೊಡಿಸುವ ನೆಪದಲ್ಲಿ ನಿರುದ್ಯೋಗಿ ಯುವಕ, ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಲಕ್ಷ ಲಕ್ಷ ಹಣ ಪೀಕಿ ಪಂಗನಾಮ ಹಾಕುತ್ತಿದ್ದ ಗ್ಯಾಂಗ್ ಪೊಲೀಸರಿಗೆ ಅಥಿತಿಯಾಗಿದ್ದಾರೆ.
ಆಂಧ್ರಮೂಲದ ಪವನ್ ಕುಮಾರ್ ಕೊಲ್ಲಿ ಎಂಬಾತ ಸಾಮಾನ್ಯದವನಲ್ಲ. ಕೆಲಸ ಅರಸಿ ಬರುವ ಆಂದ್ರ ಮೂಲದವ್ರೇ ಈತನ ಟಾರ್ಗೆಟ್. ಕೆಲಸ ಕೊಡಿಸ್ತೀನಿ ಅಂತಾ ಒಂದು ಸಾವಿರಕ್ಕೂ ಅಧಿಕ ಜನರಿಂದ ಲಕ್ಷ ಲಕ್ಷ ಪೀಕಿ ಸುಮಾರು 20 ಕೋಟಿಗೂ ಅಧಿಕ ಹಣ ಪಡೆದು ಪಂಗನಾಮ ಹಾಕಿದ್ದಾನೆ.
ಕಂಪನಿ ಸೇರಿಕೊಳ್ಳಲು ಮೂವತ್ತು ಜನ ಹಣದೊಂದಿಗೆ ರೆಡಿ ಇದ್ದಾರೆ. ಬೆಂಗಳೂರು ಬಂದರೆ ಕೆಲಸ ಆಗುತ್ತೆ ಅಂತಾ ಹೇಳಿದ್ದೆ ತಡ. ದೆಹಲಿಯಲ್ಲಿ ಅವತಿದ್ದ ಈತ ತಕ್ಷಣ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಪ್ರತ್ಯಕ್ಷವಾಗಿಬಿಟ್ಟಿದ್ದ. ಸಿಕ್ಕಿದ್ದೇ ಚಾನ್ಸ್ ಅಂದುಕೊಂಡವರು ಆತನನ್ನ ಲಾಕ್ ಮಾಡಿ ಲಾಡ್ಜ್ ವೊಂದರಲ್ಲಿ ಕೂಡಿಹಾಕಿದ್ರು.
ಅಲ್ಲಿಯೂ ಚಾಲಾಕಿ ಬುದ್ಧಿ ತೋರಿದ ಆಸಾಮಿ ಡಯಲ್ 112 ಗೆ ಕರೆ ಮಾಡಿ ನನ್ನನ್ನ ಕಿಡ್ನಾಪ್ ಮಾಡಿದ್ದಾರೆ ಕಾಪಾಡಿ ಎಂದು ಪುಂಗಿ ಊದಿದ್ದನು. ವೈಟ್ ಫೀಲ್ಡ್ ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಅಸಲಿಯತ್ತು ಬಯಲಾಗಿದೆ.
ಸಂತ್ರಸ್ಥರಿಂದ ಹಣ ಪಡೆದು ಆರೋಪಿ ಪವನ್ ಕುಮಾರ್ ಕೊಲ್ಲಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ. ಪವನ್ ಬಂಧನವಾಗಿದ್ದು ಉಳಿದಿಬ್ಬರು ಆರೋಪಿಗಳಾದ ಮಧು ಮತ್ತು ರತ್ನಕಾಂತ್ ಬಂಧನಕ್ಕೆ ಬಲೆ ಬೀಸಲಾಗಿದೆ.