ಮಂಗಳೂರು: ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಬಳಿಕ ಉದ್ವಿಗ್ನಗೊಂಡು ಶಾಂತವಾಗಿದ್ದ ಕರಾವಳಿ ಮತ್ತೆ ಕೊತ ಕೊತ ಅಂತಿದೆ. ಯುವಕನ ಬರ್ಬರ ಕೊಲೆಯಿಂದಾಗಿ ಶಾಂತಿ ಕದಡಿದೆ. ಬಂಟ್ವಾಳದಲ್ಲಿ ನಡೆದಿದ್ದ ಕೊಲೆ ಇಡೀ ಕರಾವಳಿ ಕೊತ ಕೊತ ಎಂದಿದೆ.
ಹೀಗಾಗಿ ಮುಂಜಾಗ್ರತವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇನ್ನೂ ರಹಿಮಾನ್ ಶವಯಾತ್ರೆಯ ವೇಳೆ ಯುವಕರು ದಾಂಧಲೆ ಸೃಷ್ಟಿಸಿರುವ ಸಿಸಿಟಿವಿ ವೀಡಿಯೋ ಈಗ ವೈರಲ್ ಆಗುತ್ತಿದೆ. ಶವ ಮೆರವಣಿಗೆಗೂ ಮುನ್ನ ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ಯುವಕರು ಬಲವಂತದಿಂದ ಬಂದ್ ಮಾಡಿಸಿದ್ದರು.
ತೆರೆದ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ದಾಂಧಲೆ ಎಸಗಿದ್ದರು. ತುಂಬೆ ಬಳಿಯ ಅಲ್ಯೂಮಿನಿಯಂ ಅಂಗಡಿ ಬಳಿ ತೆರಳಿ ಕೂಗಾಡಿ, ಕಾರ್ಮಿಕನ ಮೇಲೆ ಹಲ್ಲೆಗೆ ಮುಂದಾಗಿ ಶಟರ್ ಎಳೆದ ಕೃತ್ಯದ ವಿಡಿಯೋ ವೈರಲ್ ಆಗಿದೆ. ತಕ್ಷಣ ಪೊಲೀಸರು ವಾಹನದಲ್ಲಿ ಸೈರನ್ ಹಾಕಿದ್ದರಿಂದ ಯುವಕರು ಕಾಲ್ಕಿತ್ತಿದ್ದಾರೆ.