ಗದಗ: ನಗರಕ್ಕೆ ಆಗಮಿಸಿದ ವಸತಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ನಗರದಲ್ಲಿ ಭರ್ಜರಿ ಸ್ವಾಗತ ದೊರೆಯಿತು. ನಗರದ ಕೋರ್ಟ್ ಸರ್ಕಲ್ ಬಳಿ ನೂರಾರು ಅಭಿಮಾನಿಗಳು ಜಮಾಯಿಸಿ, ಹೂಮಳೆ ಸುರಿಸಿ, ‘ಶೇರ್ ಆಯಾ ಶೇರ್ ಆಯಾ’ ಎಂಬ ಘೋಷಣೆಗಳನ್ನು ಕೂಗಿದರು.
ಇತ್ತೀಚೆಗೆ ಸಂಸದ ಡಿ.ಕೆ. ಸುರೇಶ್ ನೀಡಿದ್ದ “ನಮ್ಮ ಅಣ್ಣನ ಹಣೆಬರಹದಲ್ಲಿ ಮುಖ್ಯಮಂತ್ರಿ ಆಗಬೇಕೆಂದಿದ್ದರೆ ಆಗ್ತಾರೆ” ಎಂಬ ಹೇಳಿಕೆ ಕುರಿತು ಗದಗನಲ್ಲಿ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, “ತಪ್ಪೇನಿದೆ? ನಾನು ಕೂಡ ಹಣೆಬರಹವನ್ನು ನಂಬುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಮುಂದುವರೆದು ಮಾತನಾಡಿದ ಅವರು, “ಹಣೆಬರಹದಲ್ಲಿ ಇದ್ದಂಗೆ ಆಗೋದು. ನಾನು MLA ಆಗ್ತೀನಿ, ಮಂತ್ರಿ ಆಗ್ತೀನಿ ಅಂತಾ ಕನಸಲ್ಲೂ ಯೋಚನೆ ಮಾಡಿರಲಿಲ್ಲ. ಆದ್ರೆ ಇಂದು ನಾನು ಐದು ಬಾರಿ MLA ಆಗಿದ್ದೇನೆ, ಮೂರು ಬಾರಿ ಸಚಿವನಾಗಿದ್ದೇನೆ. ಇದು ಎಲ್ಲವೂ ನನ್ನ ಹಣೆಬರಹದಲ್ಲಿ ಬರೆಯಲ್ಪಟ್ಟಿದ್ದುದರಿಂದಲೇ ನಡೆದಿದೆ” ಎಂದು ಹೇಳಿದರು.
ಡಿ.ಕೆ. ಸುರೇಶ್ ಅವರ ಮಾತಿನಲ್ಲಿ ತಪ್ಪಿಲ್ಲ ಎಂದ ಜಮೀರ್, “ಹಣೆಬರಹದಲ್ಲಿ ಬರದಿದ್ದರೆ ಅವರೂ ಮುಖ್ಯಮಂತ್ರಿ ಆಗಬಹುದು. ಕೊನೆಗೂ ಆಗೋದು ಹಣೆಬರಹದಲ್ಲಿ ಇದ್ದಂತೆಯೇ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.



