ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಆಂಧ್ರಪ್ರದೇಶದ ಸ್ಟೇಟ್ ಅಂಡ್ ಕಲ್ಚರ್ ಕಮಿಷನ್ ಕ್ರಿಯೇಟಿವಿಟಿ, ಫೈನ್ ಆರ್ಟ್ ಅಕಾಡೆಮಿ ಆಂಧ್ರಪ್ರದೇಶ ಗುಂಟೂರ್ ಇವರ ಸಂಯುಕ್ತ ಆಶ್ರಯದಲ್ಲಿ 19ನೇ ವರ್ಷದ ಇಂಡಿಯನ್ ಆರ್ಟ್ ಫೆಸ್ಟಿವಲ್ ಅದ್ದೂರಿಯಾಗಿ ಜರುಗಿತು.
ಈ ಚಿತ್ರಕಲಾ ಸ್ಪರ್ಧೆಯಲ್ಲಿ ಗದುಗಿನ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ ಝಯನ್ ಖಾದರಸಾಬ ತಹಸೀಲ್ದಾರ ಭಾಗವಹಿಸಿ, ಕ್ರೇಯಾನ್ಸ್ ಮಾಧ್ಯಮದಿಂದ ಪರಿಸರ ಮಾಲಿನ್ಯ ಚಿತ್ರವನ್ನು ರಚಿಸಿ ಬೆಳ್ಳಿ ಪದಕವನ್ನು ಪಡೆದಿದ್ದಾನೆ.
ಸಾಧಕ ವಿದ್ಯಾರ್ಥಿಗೆ ಮತ್ತು ತರಬೇತಿ ನೀಡಿದ ಕಲಾವಿದರಾದ ಡಾ. ಜಾಕೀರಹುಸೇನ ಅವರಿಗೆ ನಗರದ ಎಂ.ಕೆ. ಕೊರ್ಲಹಳ್ಳಿ ಫೌಂಡೇಶನ್ ಟ್ರಸ್ಟ್ನ ಅಧ್ಯಕ್ಷರು, ಸರ್ವ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಅಂಗನವಾಡಿ ಕಾರ್ಯಕರ್ತೆ ಕಸ್ತೂರಿ ಆಲೂರ, ಮುತ್ತು ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಬಳಗದ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.