ವಿಜಯಸಾಕ್ಷಿ ಸುದ್ದಿ, ಗದಗ
Advertisement
ಆರು ಜನತ ತಂಡವೊಂದು ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಮಾಡಿ ಬಂಧಿಸಿದ ಘಟನೆ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುರಡಿತಾಂಡಾದ ಸೇವಾಲಾಲ ದೇವಸ್ಥಾನದ ಎದುರಿಗೆ ಜೂಜಾಟದಲ್ಲಿ ತೊಡಗಿದ್ದ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪದ ಮುದಕಪ್ಪ ಲಕ್ಷ್ಮಣ್ಣ ನಾಗಾವಿ, ಹನಮಂತ ಪಕ್ಕೀರಪ್ಪ ಹೊಸೂರು, ಮುರಡಿ ತಾಂಡಾದ ಕುಮಾರ್ ಮೇಗಪ್ಪ ಬೂದಿಹಾಳ, ಮಹಾಂತೇಶ್ ರತ್ನಪ್ಪ ರಾಥೋಡ್, ಗುಡ್ಡದಬೂದಿಹಾಳ ಗ್ರಾಮದ ಸಿದ್ದನಗೌಡ ನಿಂಗನಗೌಡ ಪಾಟೀಲ್, ಗೋಣೆಶ್ ಅಲಿಯಾಸ್ ರಮೇಶ್ ಮಲ್ಲಪ್ಪ ತಳವಾರ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತರಿಂದ ನಗದು 1950 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.