ಆಸ್ಪತ್ರೆಯಿಂದ ವಿಚಾರಾಧೀನ ಕೈದಿ ಎಸ್ಕೇಪ್

0
Spread the love

ವಿಜಯಸಾಕ್ಷಿ ಸುದ್ದಿ, ಕಲಬುರಗಿ

Advertisement
  • ಕಿಟಕಿಯಿಂದ ಜಿಗಿದು ಪರಾರಿಯಾದ ಸ್ನೇಹಿತನ ಕೊಲೆ ಆರೋಪಿ

ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೋರ್ವ ಆಸ್ಪತ್ರೆಯ ಕಿಡಕಿಯಿಂದ ಜಿಗಿದು ಪರಾರಿಯಾದ ಘಟನೆ ಜರುಗಿದೆ.
ಸಿದ್ದಪ್ಪ ಅಲ್ಲೂರ್ (22) ಪರಾರಿಯಾದ ಕೈದಿ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರು ಬಿ ಗ್ರಾಮದ ನಿವಾಸಿಯಾದ ಸಿದ್ದಪ್ಪ ಎರಡು ತಿಂಗಳ ಹಿಂದಷ್ಟೇ ಸ್ನೇಹಿತನನ್ನು ಕೊಲೆ ಮಾಡಿ
ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸೇರಿದ್ದ‌.

ನಾಲ್ಕು ದಿನದ ಹಿಂದೆ ಅಸಹಜ ವರ್ತನೆ ಹಿನ್ನೆಲೆಯಲ್ಲಿ ಜಿಮ್ಸ್ ಆಸ್ಪತ್ರೆ ಜೈಲು ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು ಇಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಕಿಡಕಿಯಿಂದ ಪರಾರಿಯಾಗಿದ್ದಾನೆ.
ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here