ಐವರು ಶ್ರೀಗಂಧ ಮರಗಳ್ಳರು ಅರೆಸ್ಟ್

0
Spread the love

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

Advertisement
  • ರಾತ್ರಿಹೊತ್ತು ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದ ಆರೋಪಿಗಳು
  • 2.81 ಲಕ್ಷ ಮೌಲ್ಯದ ಶ್ರೀಗಂಧ, ವಾಹನ ವಶ

ಚಿಕ್ಕಜಾಜೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಶ್ರೀಗಂಧ ಮರ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 2.80 ಲಕ್ಷ ಮೌಲ್ಯದ 51 ಶ್ರೀಗಂಧ ಮರದ ತುಂಡು, 1 ಬೈಕ್ ವಶಪಡಿಸಿಕೊಂಡಿದ್ದಾರೆ.

ಹೊಳಲ್ಕೆರೆ ತಾಲೂಕಿನ ಕಾಗಳಗೆರೆ ಗ್ರಾಮದ
ಪಾಂಡುರಂಗ, ಮಹಂತೇಶ್, ಬಸವರಾಜ್, ರಾಜಪ್ಪ, ಮುನ್ನಾ ಬಂಧಿತ ಆರೋಪಿಗಳು.
ಚಿಕ್ಕಜಾಜೂರು ವ್ಯಾಪ್ತಿಯ ಸಾಸಲು ಗ್ರಾಮದ ಪ್ರಶಾಂತಕುಮಾರ ಬಿ.ಜೆ. ಎಂಬುವವರ 4 ಎಕರೆ ಜಮೀನಿನಲ್ಲಿ 50 ಶ್ರೀಗಂಧದ ಮರಗಳನ್ನು ಬೆಳೆದಿದ್ದರು.‌ ಆರೋಪಿಗಳು ಜು.9ರಂದು ರಾತ್ರಿ 8 ಮರಗಳನ್ನು ಕಡಿದು ಐದು ಮರಗಳನ್ನು ಕಡಿದು ಮೂರು ಮರಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಪ್ರಶಾಂತಕುಮಾರ್ ಚಿಕ್ಕಜಾಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪಿಎಸ್ಐ ಬಾಹುಬಲಿ ನೇತೃತ್ವದಲ್ಲಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here