ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಸುಜಾತಾ ದೊಡ್ಡಮನಿ ಬಿರುಸಿನ ಪ್ರಚಾರ

0
Spread the love

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

Advertisement

ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೋಳಿ ಅವರ ಪರವಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹೀರೆಭಾಗೇವಾಡಿ ಬ್ಲಾಕ್ ನಲ್ಲಿ ಪ್ರಚಾರ ಸಭೆ ಏರ್ಪಡಿಸಲಾಯಿತು.

ಸಭೆಯಲ್ಲಿ ಲೋಕಸಭಾ ಉಪಚುನಾವಣಾ ಕ್ಷೇತ್ರದ ಕಂಟ್ರೋಲ್ ರೂಂನ ಕೆಪಿಸಿಸಿ ಸಂಯೋಜಕಿ ಸುಜಾತಾ ದೊಡ್ಡಮನಿ ಅವರು ಪಕ್ಷದ ಅಭ್ಯರ್ಥಿಯ ಗೆಲುವಿನ ರೂಪುರೇಷಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಸಿ.ಸಿ.ಪಾಟೀಲ, ಕಿಸಾನ್ ಘಟಕದ ಕಾರ್ಯದರ್ಶಿ ಅನೀಲ್ ಪಾಟೀಲ್, ತಾಪಂ ಸದಸ್ಯೆ ಗೌರಮ್ಮ ಪಾಟೀಲ್, ಕೆಪಿಸಿಸಿ ಅಧ್ಯಕ್ಷ(ಎಸ್ಸಿ) ಉಪಾಧ್ಯಕ್ಷ ಎಲ್. ಎಸ್. ಲಗಮಪ್ಪಗೋಳ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅಣ್ಣಾ ಸಾಹೇಬ ಹಂಚಿನಮನಿ, ಪುಂಡಲೀಕ ಕೇಳಗೆರಿ, ಪ್ರಕಾಶ ಬಾನಿಕಟ್ಟಿ, ಬಸನಗೌಡ ಪಾಟೀಲ್, ಗೌಸ್ ಮುದ್ದಿನ್ ಜಾಲೀಕೊಪ್ಪ, ನಿಂಗಪ್ಪ ತಳವಾರ, ಗ್ರಾಪಂ ಸದಸ್ಯರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here