
ವಿಜಯಸಾಕ್ಷಿ ಸುದ್ದಿ, ಉಡುಪಿ
Advertisement
ಕೃಷಿ ಭೂಮಿಯಲ್ಲಿ ಕಾರು ಸಿಲುಕಿದ ಪರಿಣಾಮ ಕೃಷಿ ಸಚಿವರು ಒದ್ದಾಡಿದ ಘಟನೆ ಜಿಲ್ಲೆಯ ಕಡೆಕಾರ್ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಆಗಮಿಸಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ರು ಕೃಷಿ ಭೂಮಿಯ ಸಮೀಪದಲ್ಲಿ ಕಾರು ತೆಗೆದುಕೊಂಡು ಹೋಗಿದ್ದರು.
ಮಳೆ ಹಿನ್ನಲೆಯಲ್ಲಿ ಸಂಪೂರ್ಣ ತೇವವಾಗಿದ್ದ ಜಾಗದಲ್ಲಿ ಕಾರಿನ ಟೈರ್ ಸಿಲುಕಿದ್ದರ ಪರಿಣಾಮ ಕಾರು ಅಲ್ಲಿಯೇ ಸಿಲುಕಿತ್ತು. ಹೀಗಾಗಿ ಅಲ್ಲಿ ನೆರೆದಿದ್ದ ಜನರು ಕೃಷಿ ಸಚಿವರು ಕಾರು ದೂಡಿ ರಸ್ತೆಗೆ ತಂದು ನಿಲ್ಲಿಸಿದ್ದರು. ಉಡುಪಿ ಕಡೆಕಾರು ಬಳಿ ಕೃಷಿ ನಾಟಿಗೆ ಕೃಷಿ ಸಚಿವರು ಚಾಲನೆ ನೀಡಿದ್ದಾರೆ. ಕೇದಾರೋತ್ಥಾನ ಟ್ರಸ್ಟ್ ಮೂಲಕ ಈ ಕೃಷಿ ಆಂದೋಲನ ಆರಂಭಿಸಲಾಗಿತ್ತು.