ವಿಜಯಸಾಕ್ಷಿ ಸುದ್ದಿ, ಗದಗ:
Advertisement
ಗದಗ-ಬೆಟಗೇರಿ ನಗರಸಭೆ ಚುನಾವಣೆಯ ಅಂಗವಾಗಿ ವಾರ್ಡ್ ನಂ.20ರ ಕಾಂಗ್ರೆಸ್ ಅಭ್ಯರ್ಥಿ ಪರವೀನಬಾನು ಅಬ್ದುಲ್ ಮುನಾಫ್ ಮುಲ್ಲಾ ಅವರ ಪರವಾಗಿ ಕಾಂಗ್ರೆಸ್ ಕೈ ನಾಯಕರು ಭರ್ಜರಿ ಪ್ರಚಾರ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಶಾಸಕ ಎಚ್.ಕೆ.ಪಾಟೀಲ್, ಮಾಜಿ ಶಾಸಕರಾದ ಡಿ.ಆರ್.ಪಾಟೀಲ್, ರಾಮಕೃಷ್ಣ ದೊಡ್ಡಮನಿ, ಜಿ.ಎಸ್.ಪಾಟೀಲ್, ಮುಖಂಡರಾದ ವಾಸಣ್ಣ ಕುರುಡಗಿ, ಗುರಣ್ಣ ಬಳಗಾನೂರ, ಕೆ.ಎಂ.ಸೈಯದ್ ಸೇರಿ ಹಲವು ಪ್ರಮುಖ ನಾಯಕರು ಮತಯಾಚಿಸಿದರು.



ಈ ಸಂದರ್ಭದಲ್ಲಿ ಹಿರಿಯ ಮುಖಂಡ ದಾವಲ್ ಸಾಬ್ ಈಟಿ, ಖಾಜಸಾಬ್ ಕೊಪ್ಪಳ, ಸುರೇಶ್ ಕಲಬುರ್ಗಿ, ಹನುಮಂತಪ್ಪ ಮುಂಡರಗಿ, ಅಬ್ದುಲ್ ರೆಹಮಾನ್ ಹುಯಿಲಗೋಳ, ಯುಸೂಫ್ ಕೊಟ್ಟೂರ, ಆರಿಫ್ ಹುನಗುಂದ, ದಾವೂದ್ ಶಿರಹಟ್ಟಿ ಸೇರಿದಂತೆ 20ನೇ ವಾರ್ಡ್ ನ ಗುರು-ಹಿರಿಯರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.