ವಿಜಯಸಾಕ್ಷಿ ಸುದ್ದಿ, ಮೈಸೂರು
ಜಿಲ್ಲೆಯ ಬಳವಾಡಿಯ ಬಯಲು ಪ್ರದೇಶದಲ್ಲಿ ಮೂರು ಚಿರತೆಗಳ ಕಳೇಬರಗಳು ಪತ್ತೆಯಾಗಿವೆ.
ಈ ಚಿರತೆಗಳಿಗೆ ಯಾರೋ ವಿಷ ಪ್ರಾಶನ ಮಾಡಿರಬಹುದು ಎಂದು ಶಂಕಿಸಲಾಗಿದೆ.
ತಾಯಿ ಚಿರತೆ ಹಾಗೂ ಎರಡು ಚಿರತೆ ಮರಿಗಳು ಸಾವನ್ನಪ್ಪಿವೆ. ಎರಡು ದಿನಗಳ ಹಿಂದೆಯಷ್ಟೇ ಬೆಮೆಲ್ ಕಾರ್ಖಾನೆಯ ಕಾಂಪೌಂಡ್ ಬಳಿಯ ಸಿಸಿಟಿವಿಯಲ್ಲಿ ಈ ಚಿರತೆಗಳು ಸೆರೆಯಾಗಿದ್ದವು.
ಆ ನಂತರ ಅವರು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಯಾರೋ ದುಷ್ಕರ್ಮಿಗಳು ಚಿರತೆಗಳಿಗೆ ತಿನ್ನುವ ತಿನ್ನುವ ಆಹಾರದಲ್ಲಿ ವಿಷ ಹಾಕಿರಬೇಕು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ತಾಯಿ ಚಿರತೆ ಹಾಗೂ ಚಿರತೆ ಮರಿಗಳು ಒಟ್ಟೊಟ್ಟಿಗೆ ಓಡಾಡುತ್ತಿದ್ದರಿಂದಾಗಿ ಬೆಮೆಲ್ ಫ್ಯಾಕ್ಟರಿ ಹಾಗೂ ಬೆಳವಾಡಿ ಸುತ್ತಮುತ್ತಲಿನ ಜನ ಭಯದ ವಾತಾವರಣದಲ್ಲಿದ್ದರು. ಭಯದ ಕಾರಣಕ್ಕೆ ವಿಷ ಹಾಕಿ ಕೊಂದಿದ್ದಾರೆಂದು ಅರಣ್ಯ ಇಲಾಖೆಯ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಶವಗಳ ಮರಣೋತ್ತರ ಪರೀಕ್ಷೆಗೆ ಅರಣ್ಯ ಸಿಬ್ಬಂದಿ ತಯಾರಿ ನಡೆಸುತ್ತಿದ್ದಾರೆ.