ನಗರಸಭೆ ಚುನಾವಣೆ; ಕಚೇರಿ‌ ಮುಂದೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣಾ ವೇಳೆ ನಗರಸಭೆ ಕಚೇರಿ ಎದುರು ಹೈಡ್ರಾಮಾ ನಡೆಯಿತು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ‌ಸ್ಥಾನಗಳ ಚುನಾವಣೆ ಆರಂಭಕ್ಕೂ‌ ಮುನ್ನ ನಗರಸಭೆಯ ಕಚೇರಿ ಮುಂದೆ ಜಮಾಯಿಸಿದ ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರು ಘೋಷಣೆ ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತರು‌ ಪ್ರಧಾನಿ‌ ಮೋದಿ ಹಾಗೂ ಸಚಿವ ಸಿ.ಸಿ.ಪಾಟೀಲ್ ಪರ ಜಯಘೋಷಗಳನ್ನು ಕೂಗಿದರೆ, ಕೈ ಕಾರ್ಯಕರ್ತರು ಶಾಸಕ ಎಚ್.ಕೆ.ಪಾಟೀಲ್ ಪರ ಘೋಷಣೆ ಕೂಗಿದರು. ಈ ವೇಳೆ ಮೊದಲು ಅವರನ್ನು‌ ಕಳುಹಿಸಿ ಆ ಮೇಲೆ ನಾವು ಹೋಗುತ್ತೇವೆ ಅಂತಾ ಉಭಯ ಪಕ್ಷಗಳ ಕಾರ್ಯಕರ್ತರು ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಹೀಗಾಗಿ ಎರಡೂ ಪಕ್ಷದ‌ ಕಾರ್ಯಕರ್ತರನ್ನು ನಿಯಂತ್ರಿಸಲು ‌ಪೊಲೀಸರು ಹರಸಾಹಸಪಟ್ಟರು.

https://youtu.be/dBXCqyo58IM


Spread the love

LEAVE A REPLY

Please enter your comment!
Please enter your name here