ವಿಜಯಸಾಕ್ಷಿ ಸುದ್ದಿ, ಗದಗ:
Advertisement
ಗದಗ ಬೆಟಗೇರಿ ನಗರಸಭೆಗೆ ನೂತನವಾಗಿ ಆಯ್ಕೆಯಾಗಿರುವ 32ನೇ ವಾರ್ಡಿನ ಬಿಜೆಪಿ ಸದಸ್ಯೆಯ ಕಾರು ಡಿಕ್ಕಿ ಹೊಡೆದ ಪರಿಣಾಮ ದೇವಸ್ಥಾನ ಧ್ವಂಸಗೊಂಡಿರುವ ಘಟನೆ ಗುರುವಾರ ಮಧ್ಯೆರಾತ್ರಿ ಅವಳಿ ನಗರದ ಟಾಂಗಾಕೂಟ ಬಳಿ ನಡೆದಿದೆ.

ಬಿಜೆಪಿ ಸದಸ್ಯೆ ಸುನಂದಾ ಪ್ರಕಾಶ್ ಬಾಕಳೆಗೆ ಸೇರಿದ (ಕೆಎ 26 ಎನ್ 2360) ಕಾರನ್ನು ಸುನಂದಾ ಅವರ ಪುತ್ರ ಚಲಾಯಿಸುತ್ತಿದ್ದ ಎನ್ನಲಾಗಿದೆ.

ಕಾರು ಮೊದಲಿಗೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡಿದಿದ್ದು, ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದಿದೆ. ಬಳಿಕ ಪುರಾತನ ಕಾಲದ ಹಳೆಯ ಮಹಾಲಕ್ಷ್ಮಿ ಗುಡಿ ಧ್ವಂಸವಾಗಿದೆ.

ಇನ್ನು ಘಟನೆಯ ಭೀಕರತೆ ನೋಡಿದರೆ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಇದುವರೆಗೂ ಪ್ರಕರಣ ದಾಖಲಾಗಿಲ್ಲ.