ವಿಜಯಸಾಕ್ಷಿ ಸುದ್ದಿ, ನರಗುಂದ:
ಇಲ್ಲಿನ ಪುಣ್ಯರಣ್ಯ ಪತ್ರಿವನ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಕರೆದ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿತು.
ಶ್ರೀ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಪತ್ರಿವನಮಠ ಇವರ ದಿವ್ಯ ಸಾನಿಧ್ಯದಲ್ಲಿ ನೆಡೆದ ಪೂರ್ವಭಾವಿ ಸಭೆಯಲ್ಲಿ ಮಠದ ಸಕಲ ಸದ್ಭಕ್ತರು ಭಾಗವಹಿಸಿ, ಆಗಸ್ಟ್ ಮೂರರಿಂದ ಜಾತ್ರಾ ಕಾರ್ಯಕ್ರಮ ನೆಡೆಸಲು ನಿರ್ಧರಿಸಲಾಗಿದ್ದು, ಏಳು ದಿನಗಳ ಕಾಲ ಜಾತ್ರೆ ನಡೆಯಲಿದೆ.
ಪ್ರತಿ ದಿನ ಒಂದೊಂದು ಊರಿನಿಂದ ಊಟದ ವ್ಯವಸ್ಥೆ ಮಾಡಲಾಗುವುದು, ಆಗಸ್ಟ್ 10 ರಂದು ತೇರು ಎಳೆಯಲು ನಿರ್ಧರಿಸಲಾಗಿದೆ. ಜಾತ್ರೆಯುದ್ದಕ್ಕೂ ವಿಶೇಷ ಕಾರ್ಯಕ್ರಮ ಜರುಗಲಿದ್ದು, ಜಾತ್ರೆಯ ಕೊನೆಯ ದಿನ ಧರ್ಮಸಭೆ ನೆಡೆಸಲು ನಿರ್ಧರಿಸಲಾಗಿದೆ ಎಂದು ಶ್ರೀ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಪತ್ರಿವನಮಠ ಇವರು ಸಕಲ ಸದ್ಭಕ್ತರು ಸಮ್ಮುಖದಲ್ಲಿ ತಿಳಿಸಿದರು.



