ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಲಕ್ಷ್ಮೇಶ್ವರ ಹಾಗೂ ಮುಳಗುಂದ ಪಟ್ಟಣದಲ್ಲಿ ನಡೆದಿದ್ದ ಎರಡು ಮನೆ ಕಳ್ಳತನ ಪ್ರಕರಣ ಬೇಧಿಸಿರುವ ಲಕ್ಷ್ಮೇಶ್ವರ ಪೊಲೀಸರು, ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ.
2021 ರ ಜನವರಿಯಲ್ಲಿ ಮುಳಗುಂದ ಹಾಗೂ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೀಗ ಮುರಿದು ಮನೆ ಕಳ್ಳತನ ಮಾಡಿದ್ದ ಲಕ್ಷ್ಮೇಶ್ವರ ಪಟ್ಟಣದ ಸಂತೋಷ ಮನೋಹರ ಗಬ್ಬೂರು ಹಾಗೂ ರಶೀದ್ ಇಸ್ಮಾಯಿಲಸಾಬ್ ಮುಳಗುಂದ ಎಂಬುವರನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ಬಾಭರಣ, ಒಂದು ಮೊಬೈಲ್ ಹಾಗೂ ನಗದು 20 ಸಾವಿರ ಜಪ್ತಿ ಮಾಡಿದ್ದಾರೆ.
ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಮಾರ್ಗದರ್ಶನದಲ್ಲಿ, ಸಿಪಿಐ ವಿಕಾಸ್ ಪಿ ಲಮಾಣಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಡಿ. ಪ್ರಕಾಶ್, ಪಿ ಎಮ್ ಬಡಿಗೇರ, ಎಎಸ್ಐ ಗುರುರಾಜ್ ಬೂದಿಹಾಳ ಸಿಬ್ಬಂದಿಗಳಾದ ಎಮ್ ಬಿ ವಡ್ಡಟ್ಟಿ, ಮಾರುತಿ ಲಮಾಣಿ, ಚಂದ್ರು ಕಾಕನೂರು, ಎಸ್ ಎಸ್ ಯರಗಟ್ಟಿ, ಎನ್ ಡಿ ಹುಬ್ಬಳ್ಳಿ ಪಾಲ್ಗೊಂಡಿದ್ದರು.
ಪೊಲೀಸರ ಕಾರ್ಯಚರಣೆ; ಇಬ್ಬರು ಕುಖ್ಯಾತ ಕಳ್ಳರ ಬಂಧನ
Advertisement