ಬಣವಿಗೆ ಬೆಂಕಿಯಿಟ್ಟ ದಾಯಾದಿಗಳು; ನ್ಯಾಯ ಕೋರಿ ಪೊಲೀಸ್ ಠಾಣೆಯ ಆವರಣದಲ್ಲಿ ಜಾನುವಾರು ಕಟ್ಡಿ ಆಕ್ರೋಶ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳಿತಾ ದಾಯಾದಿಗಳು ಎಂಬ ಮಾತಿನಂತೆ ಆಸ್ತಿಗಾಗಿ ನಡೆದ ದಾಯಾದಿಗಳ ಕಲಹ ವಿಕೋಪಕ್ಕೆ ಹೋಗಿದ್ದು, ವರ್ಷದುದ್ದಕ್ಕೂ ಆಗುವಷ್ಟು ಶೇಖರಿಸಿಟ್ಟಿದ್ದ ಮೇವಿನ ಬಣವಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಈ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಹುಣಶೀಕಟ್ಟಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮದ ನಿವಾಸಿ ಹನಮಂತಗೌಡ ಹೆಬ್ಬಳ್ಳಿ ಎಂಬುವವರಿಗೆ ಸೇರಿದ ಮೇವಿನ ಬಣವಿಗಳಿಗೆ ಸಹೋದರ ಬಸವನಗೌಡ ಹೆಬ್ಬಳ್ಳಿ ಬೆಂಕಿ ಹಂಚಿದ್ದಾರೆ. ಇದರ ಪರಿಣಾಮವಾಗಿ ಸುಮಾರು 1 ಲಕ್ಷ ರೂ. ಮೌಲ್ಯದ ಕಡಲೆ, ಗೋದಿ ಹೊಟ್ಟು, ಮೇವು ಹಾಗೂ ಕೃಷಿಗೆ ಉಪಯೋಗಿಸುವ ವಸ್ತುಗಳು ಬೆಂಕಿಗಾಹುತಿ ಆಗಿವೆ.
ಇದರಿಂದ ನೊಂದ ಕುಟುಂಬ ನ್ಯಾಯಕ್ಕಾಗಿ ಜಾನುವಾರು ಸಮೇತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹುಣಶೀಕಟ್ಟಿ ಗ್ರಾಮದಲ್ಲಿ ಸುಮಾರು 12 ಎಕರೆ ಜಮೀನು ವಿಷಯಕ್ಕಾಗಿ ಹನಮಂತಗೌಡ ಹಾಗೂ ಬಸವನಗೌಡ ಸಹೋದರರ ನಡುವೆ ಕಲಹ ಏರ್ಪಟ್ಟಿದೆ. ನ್ಯಾಯಾಲಯದಲ್ಲಿರುವ ಪ್ರಕರಣ ಹಿಂಪಡೆಯುವಂತೆ ಕಳೆದ ಹಲವು ದಿನಗಳ ಹಿಂದೆ ಹನಮಂತಗೌಡ ಮೇಲೆ, ಬಸವನಗೌಡ ಹೆಬ್ಬಳ್ಳಿ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಬಸವನಗೌಡ ಕುಟುಂಬಸ್ಥರು ರಾತ್ರಿ ವೇಳೆ ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ನಾಲ್ಕು ಮೇವಿನ ಬಣವಿಗಳಿಗೆ ಬೆಂಕಿ ಇಟ್ಟಿದ್ದಾರೆ.

ಇನ್ನು ಕಳೆದ ಮೂರು ದಿನಗಳ‌ ಹಿಂದೆ ಬಸವನಗೌಡ ಹೆಬ್ಬಳ್ಳಿ ಸಹೋದರ ಹನಮಂತಗೌಡ ಹೆಬ್ಬಳ್ಳಿ ಅವರ ಮೇಲೆ ಹಲ್ಲೆ ಮಾಡಿದ್ದು, ಗಾಯಗೊಂಡಿರುವ ಹನಮಂತಗೌಡ ನರಗುಂದ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಇತ್ತ ಜಾನುವಾರುಗಳಿಗಾಗಿ ಸಂಗ್ರಹಿಟ್ಟಿದ್ದ ಮೇವು ಸುಟ್ಟು ಬೂದಿಯಾಗಿದ್ದರಿಂದ ಕುಟುಂಬ ಕಂಗಾಲಾಗಿದೆ.

ಈ ಕುರಿತು ಬಸವನಗೌಡ ವಿರುಪಾಕ್ಷಗೌಡ ಹೆಬ್ಬಳ್ಳಿ, ವಿರುಪಾಕ್ಷಗೌಡ ಬಸವನಗೌಡ ಹೆಬ್ಬಳ್ಳಿ, ಕಲ್ಲನಗೌಡ ತಿಪ್ಪಣ್ಣ ಗೊನ್ನಗರ, ಚೆನ್ನವ್ವ, ಕಸ್ತೂರೆವ್ವ ಬಸವನನೌಡ ಹೆಬ್ಬಳ್ಳಿ, ಗಂಗವ್ವ ಸಂಗಣ್ಣ ದೊಡ್ಡಗಾಣಿಗೇರ ಅವರ ಮೇಲೆ ನರಗುಂದ ಪೊಲೀಸ್ ಠಾಣೆಯಲ್ಲಿ ‌ದೂರು‌ ದಾಖಲಾಗಿದ್ದು, ಆರೋಪಿತರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


Spread the love

LEAVE A REPLY

Please enter your comment!
Please enter your name here