ಬಿಎಸ್ ವೈ ಈಗಲೂ ನಮ್ಮ ಮಾರ್ಗದರ್ಶಕರು

0
Spread the love

  • ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿಕೆ

ನಾವು ದೆಹಲಿ ನಂಬಿ ಬಂದವರಲ್ಲ. ಬೆಂಗಳೂರು ನಂಬಿ ಬಂದವರು. ಯಡಿಯೂರಪ್ಪನವರೇ ಈಗಲೂ ನಮ್ಮ ಮಾರ್ಗದರ್ಶಕರು ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.

Advertisement

ನೂತನ ಸಿಎಂ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪನವರು ಅಧಿಕಾರ ಬಿಟ್ಡಿದ್ದಾರೆ ಹೊರತು ಪಕ್ಷವನ್ನಲ್ಲ. ನೂತನ ಸಿಎಂ ಸಹ ಯಡಿಯೂರಪ್ಪನವರ ಮಾರ್ಗದರ್ಶನದಲ್ಲೇ ಕಾರ್ಯನಿರ್ವಹಿಸುತ್ತಾರೆ.

ನಾವು ಡೆಲ್ಲಿ ನಂಬಿ ಬಂದವರಲ್ಲ, ಬೆಂಗಳೂರು ನಂಬಿ ಬಂದವರು. ಹೀಗಾಗಿ ದೆಹಲಿ ವರಿಷ್ಠರು ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here