ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೊರೊನಾ ಎರಡನೇ ಅಲೆಯಿಂದಾಗಿ ದೇಶ ಹಾಗೂ ರಾಜ್ಯದ ಜನತೆ ಕಂಗಾಲಾಗಿದ್ದಾರೆ. ದಿನಕ್ಕೊಂದು ಸಮಸ್ಯೆಗಳು ತಲೆದೋರುತ್ತಿವೆ. ಹೀಗಾಗಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಗೂ ಜನರ ಮನ ಗೆದ್ದಿದ್ದ ರಿಯಾಲಿಟಿ ಶೋ 72 ದಿನಕ್ಕೆ ಬಾಗಿಲು ಹಾಕಿಕೊಂಡಿದೆ. ಹೊರಗೆಡೆ ಏನು ನಡೆಯುತ್ತಿದೆ ಎನ್ನುವುದೇ ತಿಳಿಯದ ಸ್ಪರ್ಧಿಗಳು ಈ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.
ಕೊರೊನಾ ಅಲೆ ಹೆಚ್ಚಾಗಿ ಶೂಟಿಂಗ್ ನಿಲ್ಲಿಸುವಂತೆ ಸರ್ಕಾರ ಸೂಟಿಸುತ್ತಿದ್ದಂತೆ, ಸ್ಪರ್ಧಿಗಳಿಗೆ ಶೋ ನಿಲ್ಲಿಸುವ ಕುರಿತು ಮಾಹಿತಿಯನ್ನು ಬಿಗ್ ಬಾಸ್ ನೀಡಿದ್ದಾರೆ. ಕೊರೊನಾ ಮಾಹಿತಿ ಹಾಗೂ ಲಾಕ್ ಡೌನ್ ಹೇರಿರುವ ತುಣುಕನ್ನು ಬಿಗ್ ಬಾಸ್ ಮನೆಯ ಒಳಗಡೆ ಪ್ರಸಾರ ಮಾಡಲಾಯಿತು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಪರ್ಧಿಗಳಲ್ಲಿ ದುಃಖ ಹಾಗೂ ಅಚ್ಚರಿ ಹೊರ ಬಂದಿದೆ.
ಈ ಸಂದರ್ಭದಲ್ಲಿ ಚಕ್ರವರ್ತಿ, ವ್ಯವಸ್ಥೆಯಲ್ಲಿ ದೊಡ್ಡ ಪ್ರಾಬ್ಲಂ ಆಗಿದೆ. ಇದಕ್ಕೆ ವ್ಯವಸ್ಥೆಯೇ ಕಾರಣ ಎಂದು ಹೇಳದರು. ಕೆಲವರು ಸಖತ್ ಭಯ ಆಗುತ್ತಿದೆ ಎಂದು ಕಣ್ಣೀರು ಹಾಕಿದರು. ಇನ್ನೂ ಕೆಲವರು ಈಗ ತಿಳಿಯುತ್ತಿದೆ. ಪ್ರಾಪರ್ಟಿಯನ್ನು ಏಕೆ ಮುಟ್ಟಬೇಡಿ ಎಂದು ಹೇಳುತ್ತಿದ್ದರು ಎಂದು. ಆದರೆ ಈ ಮನೆಯನ್ನ ತುಂಬ ಮಿಸ್ ಮಾಡಿಕೊಳ್ಳುತ್ತೇನೆ ಎಂದು ರಘು ಜೊತೆ ಶಮಂತ್ ಕಣ್ಣೀರು ಹಾಕಿದರು.
ಭಾನುವಾರವೇ ಶೋ ಮುಗಿದಿದೆ. ಆದರೆ ವಿದಾಯದ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ. ಸ್ಪರ್ಧಿಗಳೆಲ್ಲ ಕಣ್ಮಣಿ ಜೊತೆಗೆ ಚರ್ಚೆ ಮಾಡುತ್ತಾ ಸಂತೋಷದಿಂದಲೇ ಸಮಯ ಕಳೆದಿದ್ದಾರೆ. ಇಂದು ಹಾಗೂ ನಾಳೆ ರಾತ್ರಿ 7.30ಕ್ಕೆ ಕೊನೆಯ ಕ್ಷಣಗಳ ಸಂಚಿಕೆಗಳು ಪ್ರಸಾರವಾಗಲಿವೆ. ಸದ್ಯ ಸಿಕ್ಕಿರುವ ಪ್ರಮೋದಲ್ಲಿ ಪ್ರಶಾಂತ್ ಸಂಬರಗಿ ಅವರು, ನಮ್ಮ ಸುರಕ್ಷತೆಗಾಗಿ ಶೋ ಎಂಡ್ ಮಾಡುತ್ತಿದ್ದೀರಾ? ಬಿಗ್ ಬಾಸ್ ನಿಮಗೆ ಸಾಷ್ಟಾಂಗ ನಮಸ್ಕಾರಗಳು ಎಂದು ಹೇಳಿದ್ದಾರೆ.