ವಿಜಯಸಾಕ್ಷಿ ಸುದ್ದಿ, ಹಾಸನ
Advertisement
ಅಪಘಾತದಲ್ಲಿ ಪತಿ ತೀರಿಕೊಂಡಿದ್ದಕ್ಕೆ ಬೇಸರದಿಂದ ತನ್ನ ಎರಡು ವರ್ಷದ ಮಗಳೊಂದಿಗೆ ತಾಯಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆ ಮಹಲ್ ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ (26), ಸಾಧ್ವಿ (2) ಮೃತ ದುರ್ದೈವಿಗಳಾಗಿದ್ದಾರೆ.
ಅಪಘಾತದಲ್ಲಿ ಪ್ರಜ್ವಲ ಅವರ ಗಂಡ ಸುರೇಂದ್ರ ಸಾವನ್ನಪ್ಪಿದ್ದರು. ಈ ನಡುವೆ ಪ್ರಜ್ವಲ ಅವರಿಗೆ ಇನ್ನೊಂದು ಮದುವೆ ಮಾಡಿದ್ದರು. ಆನೆಮಹಲ್ ಗ್ರಾಮದ ಮೋಹನ್ ಎಂಬುವವರೊಂದಿಗೆ ಮದುವೆ ಮಾಡಲಾಗಿತು. ಪತಿಯ ಹೆಂಡತಿ ಕೂಡ ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಹೀಗಾಗಿ ಇಬ್ಬರ ಮದುವೆ ಮಾಡಿದ್ದರು.
ಆದರೆ, ಪ್ರಜ್ವಲ ಮಾತ್ರ ಮೊದಲ ಗಂಡನ ನೆನಪಿನಲ್ಲಿಯೇ ಇದ್ದರು. ಹೀಗಾಗಿ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸಕಲೇಶಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.