ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ
Advertisement
ಕೋವಿಡ್ ಸೋಂಕಿಗೆ ತುತ್ತಾಗಿ ಪೋಷಕರನ್ನು ಕಳೆದುಕೊಂಡಿರುವ 9 ಮಕ್ಕಳನ್ನು ಆರೋಗ್ಯ ಸಚಿವ ಡಾ. ಡಿ. ಸುಧಾಕರ್ ದತ್ತು ಪಡೆದಿದ್ದಾರೆ.
ಹುಟ್ಟು ಹಬ್ಬದ ಅಂಗವಾಗಿ ಸಚಿವ ಸುಧಾಕರ್ ದತ್ತು ಪಡೆದು ಮಾನವೀಯತೆ ಮೆರೆದಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಅನಾಥರಾದ ಮಕ್ಕಳ ಕುರಿತು ಸಚಿವ ಸುಧಾಕರ್ ಸರ್ವೇ ನಡೆಸಿದ್ದರು. ಸರ್ವೇ ಸಂದರ್ಭದಲ್ಲಿ ಒಂಭತ್ತು ಮಕ್ಕಳು ತಂದೆ ಹಾಗೂ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರು.
ದತ್ತು ಪಡೆದು ಅನಾಥ ಮಕ್ಕಳ ಶೈಕ್ಷಣಿಕ ಭವಿಷ್ಯದ ಹೊಣೆಯನ್ನು ಸಚಿವ ಸುಧಾಕರ್ ವಹಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇಂದು 9 ಮಕ್ಕಳ ಭವಿಷ್ಯಕ್ಕೆ ತಲಾ ರೂ. 1 ಲಕ್ಷ ದೇಣಿಗೆ ನೀಡಿದ್ದಾರೆ.
ಈ ಮೂಲಕ ರಾಜ್ಯದಲ್ಲಿನ ಇನ್ನಿತರ ಮಂತ್ರಿಗಳಿಗೆ ಸುಧಾಕರ್ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆರ್ಥಿಕವಾಗಿ ಅನುಕೂಲವಿರುವ ಜನರು ಈ ರೀತಿ ಅನಾಥ ಮಕ್ಕಳ ಬಾಳಿಗೆ ಬೆಳಕಾಗಬೇಕು ಎಂದು ಮನವಿ ಮಾಡಿದ್ದಾರೆ.