ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಲಸಿಕೆ ಅಭಾವ ತೀವ್ರಗೊಂಡಿದೆ. ಅಲ್ಲದೇ, ಮೊದಲ ಡೋಸ್ ಪಡೆದವರಿಗೂ ಲಸಿಕೆ ಸಿಗುತ್ತಿಲ್ಲ. ಇದರಿಂದ ಜನ ಪರದಾಡುತ್ತಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.
ನಗರದ ಕೆ.ಸಿ ಜನರಲ್ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ಜನರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಲಸಿಕೆ ಪಡೆಯುವವರು ಕೋವಿನ್ ಜಾಲತಾಣದ ಮೂಲಕ ಹೆಸರು ನೊಂದಾಯಿಸೇಕು. ಆದರೆ, ದಾಖಲೆ ಪ್ರಕ್ರಿಯೆ ಮುಗಿಸಿದರೂ ಲಸಿಕೆ ಸಿಗುತ್ತಿಲ್ಲ. ಹಲವರು ಬೆಳಿಗ್ಗೆ 6ರಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಲಸಿಕೆ ಇಲ್ಲದೆ ಮರಳಿ ಹೋಗುತ್ತಿದ್ದಾರೆ.
ಜಿಲ್ಲಾ ಕೇಂದ್ರಗಳಲ್ಲಿಯೋ ಲಸಿಕೆಯ ಸಮಸ್ಯೆ ಎದುರಾಗುತ್ತಿದೆ. ಕಲಬುರಗಿ, ಕೋಲಾರ, ಮೈಸೂರು ಸೇರಿದಂತೆ ವಿವಧಡೆ ಅಭಾವ ತಲೆದೋರಿದೆ. ಎರಡನೇ ಡೋಸ್ ಅವಧಿ ಮುಗಿದರೂ ಅಂತಹ ವ್ಯಕ್ತಿಗಳಿಗೆ ಲಸಿಕೆ ಸಿಗುತತಿಲ್ಲ. ಎರಡನೇ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಬಂದರೂ ಮರಳಿ ಹೋಗುತ್ತಿದ್ದಾರೆ. ಆಸ್ಪತ್ರೆಗಳ ಮುಂದೆ ಸ್ಟಾಕ್ ಖಾಲಿ ಆಗಿದೆ ಎಂದು ಬೋರ್ಡ್ ಹಾಕಲಾಗಿದೆ. ಹೀಗಾಗಿ ಆಪ್ ನಲ್ಲಿ ರಿಜಿಸ್ಟ್ರಾರ್ ಆದರೂ ಯಾವುದೇ ಪ್ರಯೋಜನ ಇಲ್ಲ ಎಂದು ಜನರು ಮರಳಿ ಹೋಗುತ್ತಿದ್ದಾರೆ.
ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸೇರಿದಂತೆ ದೇಶದಲ್ಲಿ ಮೂರನೇ ಅಲೆಯನ್ನು ನಿಯಂತ್ರಿಸಲು ಕೂಡ ಲಸಿಕೆಯ ಪಾತ್ರ ಸಾಕಷ್ಟಿದೆ. ಹೀಗಾಗಿ ಸಕಾಲದಲ್ಲಿ ಜನರಿಗೆ ಲಸಿಕೆ ತಲುಪಿಸಬೇಕು ಎನ್ನುವುದು ಎಲ್ಲರ ಬಯಕೆಯಾಗಿದೆ.