ವಿಜಯಸಾಕ್ಷಿ ಸುದ್ದಿ, ಬಳ್ಳಾರಿ
ಬಳ್ಳಾರಿ ಪ್ರವೇಶಕ್ಕೆ ನ್ಯಾಯಾಲಯವು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಶುಕ್ರವಾರ ಬಳ್ಳಾರಿಗೆ ಧಾವಿಸಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ತಮ್ಮ ನಿವಾಸದಲ್ಲಿ ಭರ್ಜರಿ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದರು.

ಪತ್ನಿ ಅರುಣಾ ಲಕ್ಷ್ಮಿ, ಪುತ್ರ ಕಿರೀಟಿ ಹಾಗೂ ಪುತ್ರಿ ಬ್ರಹ್ಮಿಣಿ ಜೊತೆಗೆ ವರಮಹಾಲಕ್ಷ್ಮಿ ಪೂಜೆಯಲ್ಲಿ ಖುಷಿಯಿಂದ ಭಾಗಿಯಾಗಿದ್ದರು. ಬೆಳಗ್ಗೆ ಬಳ್ಳಾರಿಯ ನಿವಾಸಕ್ಕೆ ಜಿ. ಜನಾರ್ದನ ರೆಡ್ಡಿ ಆಗಮಿಸಿದರು.
ಸಹೋದರನ ಆಗಮನದ ಬಗ್ಗೆ ಸಹೋದರ ಸೋಮಶೇಖರ ರೆಡ್ಡಿ ಅವರೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಬಳ್ಳಾರಿ ಎಸ್ಪಿ ಎಸ್.ಪಿ. ಸೈದುಲ್ಲಾ ಅಡಾವತ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.



