ವಾಮಾಚಾರ ಮಾಡಿಟ್ಟ ವಸ್ತು ಕಂಡ ಯುವಕ ಹೀಗೇಕೆ ಮಾಡಿದ?

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

Advertisement

ಅವಳಿ ನಗರದಲ್ಲಿ ಪಾಲಿಕೆ ಚುನಾವಣೆಯ ಜ್ವರ ಜೋರಾಗಿದ್ದು, ಆಕಾಂಕ್ಷಿಗಳ ನಿದ್ದೆಯೇ ಮಾಯವಾಗಿದೆ.

ಈಗಿನಿಂದಲೇ ಪಾಲಿಕೆ ಮಾಜಿ ಸದಸ್ಯರಿಂದ ಹಿಡಿದು ಹೊಸಬರು ತೀವ್ರ
ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ವಾರ್ಡ್ ವಿಂಗಡನೆಯ ಟೆನ್ಷನ್ ಒಂದೆಡೆಯಾದರೆ, ಒಬ್ಬರ ಕಾಲು ಮತ್ತೊಬ್ಬರೆಳೆಯುವ ಹುನ್ನಾರ ಆರಂಭವಾಗಿದೆ.

ಈ ಮಧ್ಯೆ ಪಾಲಿಕೆಯ ವಾರ್ಡ್ ಒಂದರಲ್ಲಿ ಟಿಕೆಟ್ ಆಕಾಂಕ್ಷಿಯೊಬ್ಬರ ಮನೆಯ ಮೂಲೆಯಲ್ಲಿ ವಾಮಾಚಾರ ಮಾಡಿಸಿದ್ದಾರೆ. ವಿಚಿತ್ರ ಪದಾರ್ಥಗಳನ್ನು ಮನೆಯ ಮೂಲೆಗೆ ಇಡಲಾಗಿತ್ತು. ಇದನ್ನು ಕಂಡು ಬಡಾವಣೆಯ ಜನ ಭೀತಿಗೊಂಡಿದ್ದರು. ಆದರೆ, ಜೆಲಾನಿ ಎಂಬ ಯುವಕ ವಾಮಾಚಾರಕ್ಕೆ ಇಟ್ಟಿದ್ದ ವಸ್ತುಗಳನ್ನು ನಿರಾತಂಕವಾಗಿ ಮುಟ್ಟುವ ಮೂಲಕ ಜನರಲ್ಲಿನ ಮೂಢನಂಬಿಕೆಯನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾನೆ.

ಮನೆಯ ಹೊರಭಾಗದ ಮೂಲೆಯೊಂದರಲ್ಲಿ ಪೇಪರ್ ಹಾಳೆಯ ಮೇಲೆ ಬಾಳೆ ಹಣ್ಣು, ಮೊಟ್ಟೆ, ಮೆಣಸಿಣಕಾಯಿ, ಅನ್ನ, ಕುಂಕುಮ ಸೇರಿಸಿ ಇಟ್ಟಿದ್ದರು. ಇವುಗಳನ್ನು ಒಂದೊಂದಾಗಿ ಮುಟ್ಟಿ ತೋರಿಸಿ ಜನರಲ್ಲಿನ ಭೀತಿ ಹೋಗಲಾಡಸಲು ಪ್ರಯತ್ನಿಸಿದರು.

ವಾಮಾಚಾರದ ಬಗ್ಗೆ
ಜನರಲ್ಲಿನ ಭಯ ದೂರವಾಗಬೇಕು. ಇದರಿಂದ ಯಾವುದೇ ಕೆಡಕು ಉಂಟಾಗುವುದಿಲ್ಲ ಎಂದು ಆ ಪ್ರದೇಶದ ಜನರಿಗೆ ಧೈರ್ಯ ತುಂಬಿದ್ದಾನೆ.


Spread the love

LEAVE A REPLY

Please enter your comment!
Please enter your name here