ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು ವತಿಯಿಂದ ಬಣಜಿಗ ಸಮಾಜಕ್ಕೆ 2ಎ ಉದ್ಯೋಗ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ, ಬುಧವಾರ ಗದಗ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಹೈಕೋರ್ಟ್ ಆದೇಶದಂತೆ ಬಣಜಿಗ ಸಮಾಜವನ್ನು ಪ್ರವರ್ಗ ‘ಡಿ’ಯಿಂದ ಪ್ರವರ್ಗ ‘ಬಿ’ಗೆ ವರ್ಗೀಕರಿಸಿ 2ಎ ಮೀಸಲಾತಿಯ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಮಾಜದ ಬಹುಕಾಲದ ಬೇಡಿಕೆಯನ್ನು ಸರ್ಕಾರ ತ್ವರಿತವಾಗಿ ಈಡೇರಿಸಿ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನ್ಯಾಯಯುತ ಅವಕಾಶ ಒದಗಿಸಬೇಕೆಂದು ಮನವಿ ಮಾಡಲಾಗಿದೆ.
ಮನವಿಯನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಗೂ ಗದಗ ತಹಸೀಲ್ದಾರರಿಗೆ ಸಲ್ಲಿಸಿ, ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷ ಈಶಣ್ಣ ಮುನವಳ್ಳಿ, ತಾಲೂಕು ಅಧ್ಯಕ್ಷ ನಾಗೇಶಪ್ಪ ಸವಡಿ, ಮಾಜಿ ತಾಲೂಕು ಅಧ್ಯಕ್ಷ ರೇವಣಪ್ಪ ಯಳಮಲಿ, ರಾಜು ಕುರುಡಗಿ, ಬಿ.ಬಿ. ಅಸೂಟಿ, ಸುರೇಶ ನಿಲುಗಲ್, ವಿರೂಪಾಕ್ಷಪ್ಪ ಅಕ್ಕಿ, ಚನ್ನವೀರಪ್ಪ ದುಂದುರ, ಬಸವರಾಜ ರಾಮನಕೊಪ್ಪ, ಶಿವಲೀಲಾ ಅಕ್ಕಿ, ಲಲಿತಾ ಇಂಗಳಳ್ಳಿ, ವೀರಣ್ಣ ಗಡಗಿ, ಸುರೇಶ ಮಾಳವಾಡ, ಎಸ್.ವಿ. ಮೆಣಸಿನಕಾಯಿ, ಎಸ್.ಎಂ. ಅಗಡಿ, ಚೇತನ ಅಂಗಡಿ, ಸುರೇಶ ಅಚ್ಚಳ್ಳಿ, ರವಿ ಪಟ್ಟಣಶೆಟ್ಟರ, ಮಾಂತೇಶ ರಾಮನಕೊಪ್ಪ, ಶಿದ್ದಲಿಂಗಪ್ಪ ಅರಳಿ, ಅಶೋಕ ಅಂಗಡಿ, ಸಂಗಪ್ಪ ಯಳಮಲಿ, ಬಸೆಟ್ಟೆಪ್ಪ ಅಚ್ಚಳ್ಳಿ, ಕೂಡ್ಲೆಪ್ಪ ಅಂಗಡಿ ಸೇರಿದಂತೆ ಜಿಲ್ಲಾ, ತಾಲೂಕು, ಗ್ರಾಮ, ಮಹಿಳಾ ಹಾಗೂ ಯುವ ಘಟಕಗಳ ಪದಾಧಿಕಾರಿಗಳು ಮತ್ತು ಸಮಾಜದ ಗಣ್ಯರು ಉಪಸ್ಥಿತರಿದ್ದರು.



