ಬೆಂಗಳೂರು: ಸಂಬಳ ಕೊಡದಿದ್ದಕ್ಕೆ ಮಾಲೀಕನ ಮನೆಯಲ್ಲೇ ಕಳ್ಳತನ ಮಾಡಿದ್ದ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಮೂಲದ ಸಿದ್ದು ಬಂಧಿತ ಆರೋಪಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಬಿಟ್ಟಿದ್ದ ಆರೋಪಿ ಸಿದ್ದು, ಅರುಂಧತಿ ಮಿಶ್ರಾ ಎಂಬುವರ ಬಳಿ ಕಾರು ಚಾಲಕನಾಗಿ ಸೇರಿದ್ದ.
ಆದರೆ, ಅರುಂಧತಿ ಬಳಿಯೂ ಆರೋಪಿ ಸಿದ್ದು ಕೆಲಸ ಬಿಟ್ಟಿದ್ದರಿಂದ 4 ತಿಂಗಳ ಸಂಬಳ ಕೊಟ್ಟಿರಲಿಲ್ಲ. ಹೀಗಾಗಿ, ಮನೆಯಲ್ಲಿ ಯಾರೂ ಇಲ್ಲದನ್ನೂ ಗಮನಿಸಿದ ಆರೋಪಿ, ನಕಲಿ ಕೀ ಬಳಸಿ ಕಳ್ಳತನ ಕೃತ್ಯ ಎಸಗಿದ್ದ. ಸದ್ಯ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದು, 682 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.



