34.4 C
Gadag
Tuesday, March 28, 2023

ಅಂದರ್-ಬಾಹರ್: ಗಂಟು ಮಾಡಲು ಕುಳಿತ ಎಂಟು ಮಂದಿ ಅರೆಸ್ಟ್ ; ಯಾರೀ ಮಹಾಶಯರು?

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಊರಿನ ಬ್ಯಾಂಕ್ ಹತ್ತಿರದ ಜಾಗೆಯಲ್ಲಿ ಸಂಜಿ ಮುಂದ ಅಂದರ್-ಬಾಹರ್ ಆಡುತ್ತ ಕುಳಿತಿದ್ದ ಎಂಟು ಜನರನ್ನು ಅರೆಸ್ಟ್ ಮಾಡಲಾಗಿದೆ. ತಾಲೂಕಿನ ಸೊರಟೂರಿನ ಗ್ರಾಮೀಣ ಬ್ಯಾಂಕ್ ಹತ್ತಿರ ಇಸ್ಪೀಟು ಆಡುತ್ತಿದ್ದ 8 ಜನರನ್ನು ಬಂಧಿಸಿರುವ ಮುಳಗುಂದ ಠಾಣೆಯ ಪೊಲೀಸರು, ಬಂಧಿತರಿಂದ 16,800 ರೂ. ವಶಪಡಿಸಿಕೊಂಡಿದ್ದಾರೆ.

ಕೆಪಿ ಆ್ಯಕ್ಟ್ 87ರ ಕಲಂ ಅಡಿ ಪ್ರಕರಣ ದಾಖಲಿಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಪಿಎಸ್‌ಐ ಪ್ರಕಾಶ್ ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬಂಧಿತರೆಲ್ಲಾ ಸೊರಟೂರಿನ ನಿವಾಸಿಗಳು. 

ಮಲ್ಲಪ್ಪ ಬಸಪ್ಪ ಅದರಗಟ್ಟಿ, ಮೈಲಾರಪ್ಪ ನಿಂಗಪ್ಪ ಕೋರಿ, ಹನುಮಂತಪ್ಪ ಬಸಪ್ಪ ಅಗಡಿ, ರಮ್ಜಾನ್‌ಸಾಬ್ ರಸೂಲ್‌ಸಾಬ್ ಹಳ್ಳಿಕೇರಿ, ಕಲ್ಮೇಶ್ ಶಿವಪ್ಪ ಕಮ್ಮಾರ, ಸೋಮಣ್ಣ ನಿಂಗಪ್ಪ ಮುರಿಗೆಣ್ಣವರ್, ಮಲಕಾಜಪ್ಪ ಗುರುಪಾದಪ್ಪ ಗಿಡಿಕೆಂಚಣ್ಣವರ್ ಮತ್ತು ಫಕ್ರುಸಾಬ್ ರಮ್ಜಾನ್‌ಸಾಬ್ ಲಕ್ಷ್ಮೇಶ್ವರ ಬಂಧಿತ ಆಟಗಾರರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,749FollowersFollow
0SubscribersSubscribe
- Advertisement -spot_img

Latest Posts

error: Content is protected !!