ಇದು ಆತ್ಮಹತ್ಯೆ ಅಲ್ಲ: ಹಿಟ್ ಆಂಡ್ ರನ್

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಮುಳಗುಂದನಾಕಾದಲ್ಲಿ ಮಧ್ಯರಾತ್ರಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅದು ಸುಸೈಡ್ ಅಲ್ಲ ಬದಲಾಗಿ ಹಿಟ್ ಆಂಡ್ ರನ್ ಕೇಸ್ ಎಂದು.

ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಶುಕ್ರವಾರ ‌ಮಧ್ಯರಾತ್ರಿ ಮುಳಗುಂದನಾಕಾದಲ್ಲಿ ಯುವಕನೋರ್ವ ರಸ್ತೆ ದಾಟುತ್ತಿದ್ದಾಗ ಭಾರಿ ಗಾತ್ರದ ಲಾರಿ ಡಿಕ್ಕಿ ಪಡಿಸಿ ಪರಾರಿಯಾಗಿತ್ತು. ನಂತರ ಆ ಯುವಕ ಮೃತಪಟ್ಟಿದ್ದ. ಮೃತಪಟ್ಟವನ ಬಗ್ಗೆ ಮೊದಲು ಮಾಹಿತಿ ಇರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಮೃತನ ಬಗ್ಗೆ ಮಾಹಿತಿ ಸಿಕ್ಕಿದ್ದು, ಗದಗನ‌ ರಹಮತ್ ನಗರ ನಿವಾಸಿ ನಾಗರಾಜ್ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ ಚಲಿಸುವ ಲಾರಿಯಡಿ ಬಿದ್ದು ಯುವಕ ಆತ್ಮಹತ್ಯೆ

ಈ ಮೊದಲು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಈಗ ಮೃತನ ಕುಟುಂಬದವರು, ಯಾವುದೋ ಗಾಡಿ ಡಿಕ್ಕಿ ಹೊಡೆದಿದ್ದರಿಂದಲೇ ನಾಗರಾಜ್ ಮೃತಪಟ್ಟಿದ್ದಾನೆ ಎಂದು ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡಿಕ್ಕಿ ಪಡಿಸಿ ಪರಾರಿಯಾದ ಚಾಲಕ ಹಾಗೂ ಲಾರಿ ಪತ್ತೆಗಾಗಿ ಜಾಲ ಬೀಸಿದ್ದಾರೆ.


Spread the love

LEAVE A REPLY

Please enter your comment!
Please enter your name here