36.4 C
Gadag
Friday, June 2, 2023

ಅಧೀಕ್ಷಕರಾಗಿ ಮುಂಬಡ್ತಿ ಹೊಂದಿದ ಎಂ.ನೂರುದ್ದೀನ್ಗೆ ಬೀಳ್ಕೊಡುಗೆ

Spread the love

ವಿಜಯಸಾಕ್ಷಿ ಸುದ್ದಿ, ಕಂಪ್ಲಿ

ಪಟ್ಟಣದ ತಹಶೀಲ್ದಾರ್ ಕಛೇರಿ ಆವರಣದ ಭೂಮಾಪನ ಇಲಾಖೆಯಲ್ಲಿ ಸಿರುಗುಪ್ಪ ಭೂಮಾಪನ ಇಲಾಖೆಯ ಅಧೀಕ್ಷಕರಾಗಿ ಮುಂಬಡ್ತಿ ಹೊಂದಿದ ಎಂ.ನೂರುದ್ದೀನ್ ಅವರಿಗೆ ಕಂಪ್ಲಿ ತಾಲ್ಲೂಕು ಆಡಳಿತ ಹಾಗೂ ಸರ್ವೆ ಇಲಾಖೆ ನೇತೃತ್ವದಲ್ಲಿ ಮಂಗಳವಾರ ಸನ್ಮಾನಿಸುವ ಮೂಲಕ ಬೀಳ್ಕೊಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ನೂರುದ್ದೀನ್ ಕಂಪ್ಲಿಯ ಸರ್ವೆ ಇಲಾಖೆಯಲ್ಲಿ ಸರ್ವೆ ಇಲಾಖೆಯ ತಪಾಸಕರಾಗಿ(ಸರ್ವೆ ಸೂಪರ್ವೈಸರ್) ಎಲ್ಲರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲಾಯಿತು. ಕಂಪ್ಲಿ ಜನತೆಯ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿರುವೆ. ಇಲ್ಲಿನ ಸರ್ವೆ ಇಲಾಖೆ ಸಿಬ್ಬಂದಿಗಳ ಸಹಕಾರವು ಹೆಚ್ಚಿನ ಮಟ್ಟದಲ್ಲಿ ದೊರೆಯಿತು. ಈಗ ಸಿರುಗುಪ್ಪ ಸರ್ವೆ ಇಲಾಖೆಯಲ್ಲಿ ಅಧೀಕ್ಷಕರಾಗಿ ಮುಂಬಡ್ತಿ ಸಿಕ್ಕ ಹಿನ್ನಲೆ ಅನಿವಾರ್ಯವಾಗಿ ಇಲ್ಲಿಂದ ವರ್ಗಾವಣೆಯಾಗಬೇಕಾಯಿತು. ಮುಂದಿನ ದಿನದಲ್ಲಿ ಕಂಪ್ಲಿಯಲ್ಲಿ ಸೇವೆ ಮಾಡಲು ಅವಕಾಶ ದೊರೆತರೆ, ಮತ್ತೇ ಬರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗೌಸಿಯಾಬೇಗಂ, ಉಪ ತಹಶೀಲ್ದಾರ್ ಬಿ.ರವೀಂದ್ರಕುಮಾರ್, ಶಿರಸ್ತೇದಾರರಾದ ಪಂಪಾಪತಿ, ಎಸ್.ರೇಖಾಮಠ್, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಮಹ್ಮದ್ ಶರೀಫ್, ಸರ್ವೆ ಅಧಿಕಾರಿಗಳಾದ ಎಂ.ಟಿ.ಮಹಾಂತೇಶ್, ನಿರಂಜನ್, ಮಚ್ಚೇಂದ್ರಪ್ಪ, ಅನೀಲ್, ಅಂಥೋನಿ, ಅಜ್ಜಣಾಚಾರ್, ಹೆಚ್.ಕರಿಬಸಪ್ಪ, ವಿರೇಶಪ್ಪ, ಆನಂದ, ಕರುಣಾಕರ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Posts