ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬದಾಮಿ: ತಂದೆಯ ಅಸ್ತಿ ವಿಸರ್ಜಿಸಲು ಹೋಗಿದ್ದ ವೇಳೆ ವ್ಯಕ್ತಿಯೊಬ್ಬ ನೀರು ಪಾಲಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಗಜೇಂದ್ರಗಡದ ಮಹಾಂತೇಶ್ ಯಾದವ್(೪೫) ಮೃತ ದುರ್ದೈವಿಯಾಗಿದ್ದು, ತನ್ನ ತಂದೆಯ ೧೧ ದಿನದ ಅಸ್ತಿಯನ್ನು ಚೊಳಚಗುಡ್ಡದ ಬಳಿ ಮಲಪ್ರಭ ನದಿಗೆ ವಿಸರ್ಜನೆ ಮಾಡುವ ವೇಳೆ ಕಾಲುಜಾರಿ ಮಲಪ್ರಭ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ಸುಮಾರು ಮೂರು ಕಿಮಿ ದೂರದಲ್ಲಿ ನಾಗರಾಳ ಎಸ್ ಪಿ ಬಳಿ, ಮಹಾಂತೇಶ್ ಶವ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲಾ ಅಗ್ನಿಶಾಮಕ ಜಿಲ್ಲಾ ಅಧಿಕಾರಿ, ಮಲ್ಲಿಕಾರ್ಜುನಪ್ಪ, ಪ್ರಧಾನ ಸಹಾಯಕ ಅಗ್ನಿಶಾಮಕ ಅಧಿಕಾರಿ, ಹಾಗೂ ಬದಾಮಿ ಅಗ್ನಿಶಾಮಕ ದಳದ ಸಿಬ್ಬಂದಿ, ಸತತ ಮೂರು ತಾಸು ಕಾರ್ಯಾಚರಣೆ ನಡೆಸಿ ಮಹಾಂತೇಶ್ ಮೃತದೇಹ ಹೊರತೆಗೆದಿದ್ದಾರೆ.
ಬದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.