36.4 C
Gadag
Friday, June 2, 2023

ಇಸ್ಪೀಟು ಜೂಜಾಟ: ಇಬ್ಬರು ವ್ಯಾಪಾರಸ್ಥರು ಸೇರಿ 10 ಜನರ ಬಂಧನ

Spread the love

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಖಾನತೋಟದ ಸಂತೋಷ ಖಟವಟೆ ಅವರ ಮನೆಯ ಬಳಿಯಿರುವ ಸಾರ್ವಜನಿಕ ಸ್ಥಳವೊಂದರಲ್ಲಿ ಇಸ್ಪೀಟು ಆಡುತ್ತಿದ್ದ ಇಬ್ಬರು ವ್ಯಾಪಾರಸ್ಥರು ಸೇರಿದಂತೆ ಹತ್ತು ಜನರನ್ನು ಬಂಧಿಸಿ, ಸುಮಾರು 48,780 ರೂ. ಹಣ ವಶಪಡಿಸಿಕೊಂಡಿದ್ದಾರೆ.

ವ್ಯಾಪಾರಸ್ಥರಾದ ಗದಗ ಶಹರದ ವಿಎನ್ ಟಿ ರಸ್ತೆಯ ನಿವಾಸಿ ಸಂತೋಷ ಅಶೋಕ ಖಟವಟೆ, ಕಿಲ್ಲಾ ಓಣಿಯ ಪರಶುರಾಮ ಬೋಜರಾಜಸಾ ದಲ್ಬಂಜನ್ ಇಬ್ಬರು ಪ್ರಮುಖ ಆರೋಪಿಗಳಾಗಿದ್ದಾರೆ.

ಅದರಂತೆ, ಬಸವೇಶ್ವರ ನಗರದ ವಿಜಯಕುಮಾರ್ ಪಟದಯ್ಯ ಹಿರೇಮಠ, ಸೇವಾಲಾಲ್ ನಗರದ ಕಿರಣ್ ಶಿವಪ್ಪ ಅಂಗಡಿ, ಬೆಟಗೇರಿಯ ಅಂಬಾಭವಾನಿ ಸರ್ಕಲ್ ನಿವಾಸಿ ಬಸವರಾಜ್ ಮಲ್ಲಪ್ಪ ಬಾರಕೇರ್, ಹುಬ್ಬಳ್ಳಿ ರಸ್ತೆಯ ನಿವಾಸಿ ಬಸವರಾಜ್ ಪ್ರಬಯ್ಯ ಹಿರೇಮಠ, ಬೆಟಗೇರಿಯ ನಿವಾಸಿ ರಾಜು ಮೆಹರವಾಡೆ ಹಾಗೂ ದಾಸರ ಓಣಿಯ ಜಗ್ಗು ಪವಾರ್ ಬಂಧಿತ ಆರೋಪಿಗಳಾಗಿದ್ದಾರೆ.

ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿದ ವೇಳೆ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Posts