ಉದ್ಯೋಗ ಖಾತ್ರಿ ಕೂಲಿ ಪಾವತಿಗೆ ಒತ್ತಾಯಿಸಿ ಕರವೇ ಧರಣಿ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ನೀರಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಸಮುದ್ರ ಗ್ರಾಮದ ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳು ಗ್ರಾ.ಪಂ. ಅಧಿಕಾರಿಗಳ ಮಾರ್ಗದರ್ಶನದಂತೆ ಮೇ ಹಾಗೂ ಜೂನ್ ತಿಂಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸಿದ್ದು, ಅವರ ಕೂಲಿ ಹಣ ಪಾವತಿಗೆ ಒತ್ತಾಯಿಸಿ, ಶುಕ್ರವಾರ ನೀರಲಗಿ ಗ್ರಾ.ಪಂ. ಎದುರು ಧರಣಿ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ್ರ ಬಣ) ಗದಗ ಜಿ ಘಟಕದ ನೇತೃತ್ವದಲ್ಲಿ ನಾಗಸಮುದ್ರ ಗ್ರಾಮದ ಉದ್ಯೋಗ ಖಾತ್ರಿ ಫಲಾನುಭವಿಗಳು ಮತ್ತು ಗ್ರಾಮಸ್ಥರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕೂಲಿ ಮಂಜೂರಾತಿ ಹಾಗೂ ಪಾವತಿಗೆ ಒತ್ತಾಯಿಸಿ, ಸೆ. 25ರಂದು ಗದಗ ತಾ.ಪಂ. ಇಓ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಧರಣಿ ನಡೆಸಲಾಯಿತು.
ಕರವೇ ಗದಗ ಜಿಧ್ಯP ಮಂಜುನಾಥ ಪಿ. ಪರ್ವತಗೌಡ್ರ ಮಾತನಾಡಿ, ನಾಗಸಮುದ್ರ ಗ್ರಾಮದ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳು ಕಾನೂನುಬದ್ಧವಾಗಿ ಕೆಲಸ ಮಾಡಿದ್ದರೂ ಈವರೆಗೂ ಬ್ಯಾಂಕ್ ಖಾತೆಗಳಿಗೆ ಕೂಲಿ ಹಣವನ್ನು ಜಮೆ ಮಾಡದಿರುವದು ಸಂಶಯಕ್ಕೆ ಕಾರಣವಾಗಿದೆ. ಗ್ರಾ.ಪಂ. ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿದು ಕೂಲಿ ಹಣ ಮಂಜೂರು ಮಾಡುತ್ತಿಲ್ಲವೆ ಎನ್ನುವುದು ಪ್ರಶ್ನೆಯಾಗಿದೆ. ಕೂಲಿ ಹಣ ಪಾವತಿ ವಿಳಂಬ ಆಧಿಕಾರಿಗಳ ಧೋರಣೆಗೆ ಕನ್ನಡಿ ಹಿಡಿದಿದೆ. ಅಧಿಕಾರಿಗಳು ಕೂಡಲೇ ಉದ್ಯೋಗ ಖಾತ್ರಿ ಫಲಾನುಭವಿಗಳಿಗೆ ಕೂಲಿ ಹಣ ಪಾವತಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರವೇ ನೇತೃತ್ವದಲ್ಲಿ ಗ್ರಾಮಸ್ಥರು ಉಗ್ರ ಹೋರಾಟ ಕೈಗೊಳ್ಳುವರೆಂದು ಎಚ್ಚರಿಸಿದರು.
ಅನಂತರ ಗದಗ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಶೀಘ್ರದಲ್ಲೇ ಕೂಲಿ ಹಣ ಮಂಜೂರು ಮಾಡುವ ಭರವಸೆಯೊಂದಿಗೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ದೇವಪ್ಪ ಕವಲೂರು, ಸುರೇಶ ಮುಳಗುಂದ, ಮಹೇಶ ಇಟಗಿ, ನಿಂಗರಾಜ ಭರಮಗೌಡ್ರ, ಗೌಸು ನದಾಫ, ಕಿರಣ ಪೂಜಾರ, ಶರಣಪ್ಪ ಮದ್ನೂರ, ಆಕಾಶ ಮಣ್ಣೂರ, ವೀರನಗೌಡ ಹನಮಂತಗೌಡ್ರ, ವಿಜಯ ಕೊಳ್ಳಿ, ಕಿರಣ ಹನಮಂತಗೌಡ್ರ, ಅಮರೇಶ ಗೋಣಿ, ವಿರೂಪಾP ಗೌಡ ಮರಿಗೌಡ್ರ, ಮುತ್ತು ಬಿಳೆಯಲಿ, ಮಹಾಂತೇಶ ಉಪಸ್ಥಿತರಿದ್ದರು.
 
 


Spread the love

LEAVE A REPLY

Please enter your comment!
Please enter your name here