ಕಪ್ಪತ ಉತ್ಸವ: ಕ್ಯಾಮೆರಾ ಕಣ್ಣಿಗೆ ಸೆರೆಯಾದ ಅತ್ಯದ್ಭುತ ಛಾಯಾಚಿತ್ರಗಳ ಪ್ರದರ್ಶನ

0
Spread the love

ವಿಜಯಸಾಕ್ಷಿ ಸುದ್ದಿ ಗದಗ
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರವಿವಾರ ಕಪ್ಪತ ಉತ್ಸವ-೨೦೨೧ ಜರುಗಿತು.

ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಷ್ಕೃತರು ಹಾಗೂ ವಿಜಯ ಕರ್ನಾಟಕ ಪತ್ರಿಕಾ ಛಾಯಾಗ್ರಾಹಕ ರಾಮು ವಗ್ಗಿಯವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಛಾಯಾಚಿತ್ರಗಳನ್ನು ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ವೀಕ್ಷಿಸಿದರು.

ರಾಮು ವಗ್ಗಿ ಅವರು ಕ್ಲಿಕ್ಕಿಸಿರುವ ಕಪ್ಪತಗುಡ್ಡದ ಸೊಬಗಿನ, ಮೃಗಾಲಯದಲ್ಲಿನ ಪ್ರಾಣಿ ಪಕ್ಷಿಗಳ, ಸೂರ್ಯಾಸ್ತ, ಕೋತಿಗಳ ಚಿತ್ರ, ಮಾಗಡಿ ಕೆರೆಯ ಪಕ್ಷಿಗಳ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ವಿದ್ಯಾರ್ಥಿಗಳು, ಪರಿಸರವಾದಿಗಳು, ನಗರದ ಜನತೆ ವಿವಿಧ ಬಗೆಯ ಪ್ರಾಕೃತಿಕ ಪರಂಪರೆ ಬಿಂಬಿಸುವ ವನ್ಯಜೀವಿಗಳ ಫೋಟೋ ನೋಡಿ ಖುಷಿ ಪಟ್ಟರು.


ಛಾಯಚಿತ್ರ ಕುರಿತು ಛಾಯಾಚಿತ್ರಗಾರ ರಾಮು ವಗ್ಗಿಯವರು ವಿವರಣೆ ನೀಡಿದರು. ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here