ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ಈರಣ್ಣ ಶಂಕರಪ್ಪ ಸೀಮಿಕೇರೆ, ಶಿವನಗೌಡ ವೀರನಗೌಡ ಪಾಟೀಲ್ ಹಾಗೂ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮುಸ್ತಾಕ್ ಜಿನ್ನಾಸಾಬ್ ದೊಡ್ಡಮನಿ ಗಡಿಪಾರಾದ ಮಟಕಾ ಬುಕ್ಕಿಗಳಾಗಿದ್ದಾರೆ.
![](http://vijayasakshi.com/wp-content/uploads/2021/02/20210223_1646294609081556570907458.jpg)
![](http://vijayasakshi.com/wp-content/uploads/2021/02/20210223_1646403960031879519965609.jpg)
ಸಮಾಜಕ್ಕೆ ಧಕ್ಕೆ ಹಾಗೂ ಸ್ವಾಸ್ಥ್ಯ ಹಾಳು ಮಾಡುವಂತ ಒಸಿ/ ಮಟಕಾ ಜೂಜಾಟದಲ್ಲಿ ತೊಡಗಿದ್ದ ಹಾಗೂ ಜನರನ್ನು ಪ್ರೇರೇಪಿಸುವಂತ ಮೂವರು ವ್ಯಕ್ತಿಗಳನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ, ಗದಗ ಎಸ್ಪಿ ಯತೀಶ್ ಎನ್ ಆದೇಶ ಹೊರಡಿಸಿದ್ದಾರೆ.
![](http://vijayasakshi.com/wp-content/uploads/2021/02/img-20210223-wa00214262379654116091637.jpg)
ಇವರ ಗಡಿಪಾರು ಆದೇಶ ಮಾಡಿರುವ ಗದಗ ಎಸ್ಪಿ ಯತೀಶ್ ಎನ್, ಇವರು ಸಾರ್ವಜನಿಕ ಆಸ್ತಿ ಮತ್ತು ಜನರ ಜೀವಹಾನಿ ಮಾಡುವ ಕೃತ್ಯಗಳಲ್ಲಿ ತೊಡಗಿದ್ದಲ್ಲದೇ, ಕಾನೂನಿನ ಭಯವಿಲ್ಲದೇ ಕಾನೂನು ಬಾಹಿರ ಚಟುವಟಿಕೆ ಮುಂದುವರೆಸಿಕೊಂಡ ಬಂದ ಹಿನ್ನೆಲೆಯಲ್ಲಿ ಇವರನ್ನು ಗಡಿಪಾರು ಮಾಡಲಾಗಿದೆ ಎಂದಿದ್ದಾರೆ.
![](http://vijayasakshi.com/wp-content/uploads/2021/02/img-20210223-wa00222339998144686176551.jpg)
ಗಡಿಪಾರಾದ ವ್ಯಕ್ತಿಗಳಲ್ಲಿ ಈರಣ್ಣ ಸೀಮಿಕೆರಿ ಮೇಲೆ 5 ಪ್ರಕರಣಗಳಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದ್ದು, ಈತನನ್ನು ರಾಯಚೂರು ಜಿಲ್ಲೆಯ ಸಿಂಧನೂರಿಗೆ ಗಡಿಪಾರು ಮಾಡಲಾಗಿದೆ. ಶಿವನಗೌಡ ಪಾಟೀಲ್ ನಿಗೂ 5 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಈತನನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಮುಸ್ತಾಕ್ ದೊಡ್ಡಮನಿಗೆ ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಈತನನ್ನು ಬಳ್ಳಾರಿ ಜಿಲ್ಲೆ ಕೌಲ್ ಬಜಾರ್ ಗೆ ಗಡಿಪಾರು ಮಾಡಲಾಗಿದೆ.
![](http://vijayasakshi.com/wp-content/uploads/2021/02/img-20210223-wa00231803464861410826538.jpg)
ಈ ಬಗೆಯ ಕಾನೂನು ಬಾಹೀರಾ ಚಟುವಟಿಕೆಗಳಲ್ಲಿ ಯಾರಾದರೂ ತೊಡಗಿಕೊಂಡರೆ ಅವರಿಗೂ ಸಹ ಇದೇ ಬಗೆಯ ಶಿಕ್ಷೆ ಕಾದಿದೆ ಎಂದು ಎಸ್ಪಿ ಯತೀಶ್ ಎನ್ ಎಚ್ಚರಿಕೆ ನೀಡಿದ್ದಾರೆ.