26.1 C
Gadag
Wednesday, October 4, 2023

ಕಿತ್ತಾಟ, ಗಲಾಟೆ ಕಾಂಗ್ರೆಸ್ ನವರ ಸಂಸ್ಕೃತಿ; ಸಚಿವ ಸಿ.ಸಿ.ಪಾಟೀಲ್ ವ್ಯಂಗ್ಯ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಗಲಾಟೆ ಸಿದ್ದರಾಮಯ್ಯನವರ ಕಾಲದಿಂದ ಬಂದಿರುವ ಪರಂಪರೆಯಾಗಿದೆ. ಸದನದಲ್ಲಿ ಇವತ್ತು ನಡೆದ ಘಟನೆ ನೋವಿನ ಸಂಗತಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಉಪ ಸಭಾಪತಿ ಪೀಠಕ್ಕಾಗಿ ನಡೆದ ಫೈಟ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವಿಶ್ವಾಸ ನಿರ್ಣಯ ಮಾಡಿದ ವೇಳೆ ಕಾಂಗ್ರೆಸ್ ನವರು ಖುರ್ಚಿ‌ ಮೇಲೆ ಕೂಡಬಾರದು. ಕಿತ್ತಾಟ, ಗಲಾಟೆ ಇದು ಕಾಂಗ್ರೆಸ್ ನವರ ಸಂಸ್ಕೃತಿ ತೋರಿಸುತ್ತದೆ. ಖುರ್ಚಿ ಮೇಲೆ ಕೂಡಬೇಕಾದರೆ ಏಳಬೇಕಾದರೆ ಪೀಠಕ್ಕೆ ಕೈ‌ಮಗಿಯುತ್ತೆವೆ. ಹಾಗಾಗಿ ಪೀಠದ ಘನತೆ, ಗೌರವ ಉಳಿಸಬೇಕು ಎಂದರು.

ಶಂಕರ್ ಬಿದರಿ ಹೊರಹಾಕಿ ಆಗಲೂ ಹೈಡ್ರಾಮಾ ಮಾಡಿದರು. ಅವಿಶ್ವಾಸ ಮಂಡನೆಗೆ ಅವಕಾಶ ಕೊಡಬೇಕಿತ್ತು, ಮತ ಹಾಕಬೇಕಿತ್ತು. ಬಹುಮತವಿಲ್ಲದೆ ಸ್ಪೀಕರ್ ಕೂಡಲು ಸಾಧ್ಯನಾ?
ಬಹುಮತವಿದ್ದರೆ ಹತ್ತು ನಿಮಷದಲ್ಲಿ‌ ಮುಗಿಯುತ್ತದೆ‌.
ಖುರ್ಚಿ ಎಳೆಯುವುದು, ಅವರು ಕೂಡಿಸುವುದು, ನಾವು ಕೂಡಿಸುವುದು ರಾದ್ಧಾಂತಾ ಬೇಕಿತ್ತಾ ಎಂದು ಸಚಿವರು ಪ್ರಶ್ನಿಸಿದರು.

ಗೋ ಹತ್ಯೆ ನಿಷೇಧದ ಕುರಿತು ಮಾತನಾಡಿದ ಅವರು, ಬಹುಮತವಿದ್ದರೆ ೧೦ ನಿಮಿಷದಲ್ಲಿ ಮುಗಿದು, ಗೋ ಹತ್ಯೆ ಬಿಲ್ ಪಾಸ್ ಆಗುತ್ತಿತ್ತು. ಕಾಂಗ್ರೆಸ್ ನವರ ಉದ್ದೇಶ ಗೋ ಹತ್ಯೆ ಬಿಲ್ ಪಾಸ್ ಮಾಡಬಾರದು ಅಂತಿರಬಹುದು ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಹಿಂಪಡೆಯುತ್ತೇವೆ ಎಂದು ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಅವರು ಹಿಂದೂಗಳ ಭಾವನೆ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಮುಖಂಡ ರಾಜು ಕುರಡಗಿ ಇದ್ದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!