Homekoppalಕುಣಿಕೇರಿ ಬಾಯ್ಸ್‌ಗೆ ಟೂರ್ನಮೆಂಟ್ ಕಪ್

ಕುಣಿಕೇರಿ ಬಾಯ್ಸ್‌ಗೆ ಟೂರ್ನಮೆಂಟ್ ಕಪ್

Spread the love

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕ್ರೀಡೆಯಿಂದ ಹಲವು ಪ್ರಯೋಜನಗಳಿದ್ದು, ಆಟದಿಂದ ಅನಗತ್ಯ ವಿಚಾರಗಳನ್ನು ದೂರ ಮಾಡಲು ಸಾಧ್ಯ ಎಂದು ಡಿಎಸ್‌ಬಿ ಪಿಎಸ್ಐ ಅಮರೇಶ್ ಹುಬ್ಬಳ್ಳಿ ಹೇಳಿದರು.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ದಿ.ಸಾಗರ ನಾಯಕ್ ಸ್ಮರಣಾರ್ಥ ಕರ್ನಾಟಕ ವಾರಿಯರ್ಸ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಡಿ ನಡೆದ ಎರಡು ದಿನಗಳ ಕ್ರಿಕೆಟ್ ಟೂರ್ನಮೆಂಟ್‌ನ ಸಮಾರೋಪ ಹಾಗೂ ಕಪ್ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕ್ರೀಡೆ ಅಂದಾಗ ಹುದ್ದೆ ಲೆಕ್ಕಕ್ಕೆ ಬರಲ್ಲ. ಕ್ರೀಡಾಂಗಣದಲ್ಲಿ ಎಲ್ಲರೂ ಸಮಾನರೇ. ಈ ಟೂರ್ನಮೆಂಟ್‌ನಲ್ಲಿ ಹಳ್ಳಿ ಹುಡುಗರ ಸಾಧನೆ ಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.
ಕೆಡಬ್ಲ್ಯೂಎಸ್‌ಸಿಯ ಅಧ್ಯಕ್ಷ ವಿನೋದ್ ಚಿನ್ನಿನಾಯ್ಕರ್ ಮಾತನಾಡಿ, ಅಪಘಾತಗಳು ಅವಸರದಿಂದಲೇ ಸಂಭವಿಸುತ್ತವೆ. ಇಂಥ ಅಪಘಾತವೊಂದರಲ್ಲಿ ಅತ್ಯುತ್ತಮ ಕ್ರೀಡಾಪಟು ಸಾಗರ್ ನಾಯಕ್ ನಮ್ಮನ್ನಗಲಿದ್ದಾರೆ. ಅವರ ಸ್ಮರಣಾರ್ಥ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ ಭಾಗವಗಹಿಸಿರುವ ಕ್ರೀಡಾಪಟುಗಳು ವಾಹನ ಚಲಾಯಿಸುವಾಗ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಕ್ಲಬ್‌ನ ಗೌರವಾಧ್ಯಕ್ಷ ಬಸವರಾಜ ಕರುಗಲ್, ಮೊಯುದ್ದೀನ್, ಕೆಇಬಿ ಗಿರೀಶ್, ಗಂಗಾಧರ ನೇವಾರ, ಗಿರೀಶ್ ಮುಂಡಾದ ಮಾತನಾಡಿದರು.
ಚಂದ್ರು, ಸಿದ್ದು ಹಾಗೂ ಸೂರಿ ನೇತೃತ್ವದಲ್ಲಿ ಟೂರ್ನಮೆಂಟ್ ಅಚ್ಚುಕಟ್ಟಾಗಿ ನಡೆಯಿತು. ಈರಣ್ಣ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿವಾಸ ವಂದಿಸಿದರು.

ದಿ.ಸಾಗರ ನಾಯಕ್ ಸ್ಮರಣಾರ್ಥ ನಡೆದ ಈ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪೊಲೀಸ್, ಕೆಇಬಿ, ಕ್ಲಬ್‌ನ ಮೂರು ತಂಡಗಳು ಸೇರಿದಂತೆ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಕ್ಲಬ್‌ನ ಎ ತಂಡ ಹಾಗೂ ಕುಣಿಕೇರಿ ಬಾಯ್ಸ್ ತಂಡಗಳ ನಡುವೆ ನಡೆದ ಫೈನಲ್ ಮ್ಯಾಚ್‌ನಲ್ಲಿ ಕುಣಿಕೇರಿ ಬಾಯ್ಸ್ 17 ರನ್‌ಗಳಿಂದ ಕ್ಲಬ್‌ನ ಎ ತಂಡವನ್ನು ಮಣಿಸಿ, ಕಪ್ ಎತ್ತಿ ಹಿಡಿದರು. ಗ್ರಾಮೀಣ ಭಾಗದ ಪ್ರತಿಭೆಗಳೇ ತುಂಬಿರುವ ಕುಣಿಕೇರಿ ಬಾಯ್ಸ್ ತಂಡಕ್ಕೆ ಅಭಿನಂದನೆ ಮಹಾಪೂರವೇ ಹರಿದು ಬಂತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!