ಕುಮಾರವ್ಯಾಸ ಸ್ಮಾರಕ ಗದಗನಲ್ಲಿ ನಿರ್ಮಾಣವಾಗಲಿ: ಪಂ. ಅನಂತ ಕುಲಕರ್ಣಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

ಕುಮಾರವ್ಯಾಸನ ಕರ್ಮಭೂಮಿ ಗದಗನಲ್ಲಿ ಕುಮಾರವ್ಯಾಸ ಸ್ಮಾರಕ ನಿರ್ಮಾಣವಾಗಲಿ ಎಂದು ಖ್ಯಾತ ದಾಸವಾಣಿ ಕಲಾವಿದರಾದ ಅನಂತ ಕುಲಕರ್ಣಿ ಹೇಳಿದರು.
ಅವರು ಶ್ರೀ ವೀರನಾರಾಯಣ ದೇವಸ್ಥಾನದ ಆವರಣದಲ್ಲಿ ಕುಮಾರವ್ಯಾಸ ಕಲಾನಯನ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಪ್ರತಿಷ್ಠಾನ ಹಾಗೂ ಹೊಂಬಾಳಿ ಕಲಾ ಅಕಾಡೆಮಿ ಯೂಟ್ಯೂಬ್ ಚಾನಲ್ ಉದ್ಘಾಟಿಸಿ ಮಾತನಾಡಿದರು.

ಗದಗ ವೀರನಾರಾಯಣ ಹಾಗೂ ಕುಮಾರವ್ಯಾಸರಿಂದ ನಾಡಿನಲ್ಲಿಯೇ ಪ್ರಖ್ಯಾತಿ ಪಡೆದಿದೆ. ಇಲ್ಲಿ ಗಮಕ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯುವಂತೆ ಸ್ಮಾರಕ ಭವನ ನಿರ್ಮಾಣವಾಗಲಿ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೀರನಾರಾಯಣ, ತ್ರಿಕೂಟೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಡಾ: ಕುಶಾಲ ಗೋಡಖಿಂಡಿ ಮಾತನಾಡಿ, ಕುಮಾರವ್ಯಾಸ ಕುರಿತಾದ ವಿಚಾರ ಸಂಕೀರ್ಣ ಹಾಗೂ ಗಮಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಕುಮಾರವ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಪಾಟೀಲ ಉಪಸ್ಥಿತರಿದ್ದರು. ಆರಂಭದಲ್ಲಿ ಶಂಕರಭಟ್ ಸೊರಟೂರ, ಪ್ರಲ್ಹಾದಾಚಾರ್ಯ ನಿಲೂಗಲ್ ವೇದಘೋಷಗೈದರು. ಶ್ರೀನಿವಾಸ ಕುಲಕರ್ಣಿ ಪ್ರಾರ್ಥಿಸಿದರು. ಹೊಂಬಾಳಿ ಅಕಾಡೆಮಿ ಅಧ್ಯಕ್ಷೆ ಮಂಜರಿ ಹೊಂಬಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕೃಷ್ಣಾಜಿ ನಾಡಿಗೇರ ವಂದಿಸಿದರು.

ನಂತರ ವಿಶ್ವನಾಥ ಕುಲಕರ್ಣಿಯವರಿಂದ ಗಮಕವಾಚನ ಪಂ. ಅನಂತ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಪ್ರತಿಷ್ಠಾನದ ಪ್ರಾ. ಎಸ್.ಜಿ. ಪಾಟೀಲ, ಜಿ.ಎ. ದೇಶಪಾಂಡೆ, ಶಂಕರಭಟ್ ಸೊರಟೂರ, ರವೀಂದ್ರ ಜೋಶಿ, ದತ್ತಪ್ರಸನ್ನ ಪಾಟೀಲ, ಆರ್.ಎಸ್. ಕುಲಕರ್ಣಿ, ಕೃಷ್ಣಾಜಿ ನಾಡಿಗೇರ, ಪ್ರಾ. ಅನಿಲ ವೈದ್ಯ, ರಾಘವೇಂದ್ರ ಜೋಶಿ, ಪ್ರಾ. ಶ್ರೀಧರ ದೇಶಪಾಂಡೆ, ವಿ.ಪಿ. ಪಾಟೀಲ, ಅರುಣ ಕುಲಕರ್ಣಿ, ರಾಜೇಶ ಕುಲಕರ್ಣಿ, ಗಿರೀಶ ಪಂತರ, ಹೂಲಿ ವಾಸುದೇವಾಚಾರ್ಯ, ಎಸ್.ಎ. ಹುಯಿಲಗೋಳ, ಮುರಳಿಧರ ಸಂಕನೂರ, ವಿತ್ತಿ ಪಾಠಕ, ಪ್ರಾಣೇಶ ಕುಲಕರ್ಣಿ, ನಂದಾ ಜಹಾಗೀರದಾರ, ಅಂಜನಾ ಕುಬೇರ ಉಪಸ್ಥಿತರಿದ್ದರು


Spread the love

LEAVE A REPLY

Please enter your comment!
Please enter your name here