ಕೊವಿಡ್ ಬಾಧಿತ ಬಿಜೆಪಿ ಎಂ.ಪಿ ಅಶೋಕ್ ಗಸ್ತಿ ನಿಧನ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಮೊದಲ ಸಲ ರಾಜ್ಯಸಭಾ ಎಂಪಿಯಾಗಿದ್ದ ರಾಜ್ಯದ ಬಿಜೆಪಿಯ ಅಶೋಕ್ ಗಸ್ತಿ  ಗುರುವಾರ ರಾತ್ರಿ 10.31ಕ್ಕೆ ನಿಧನರಾದರು ಎಂದು ನಗರದ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಮನೀಶ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನವೇ ಗಸ್ತಿ ನಿಧನರಾದರು ಎಂದು ಸುದ್ದಿ ಹರಿದಾಡಿತ್ತು. ಸಚಿವ ಶ್ರೀರಾಮುಲುಈ ಕುರಿತಾಗಿ ಟ್ವೀಟ್ ಮಾಡಿದ ನಂತರ ಸಚಿವ ಜಗದೀಶ ಶೆಟ್ಟರ್ ಸೇರಿ ಹಲವರು ಇದೇ ಸಂದೇಶ ಹಾಕಿದ್ದರು. ಆದರೆ ಸಾಯಂಕಾಲ ಇದು ತಪ್ಪು ಮಾಹಿತಿ ಎಂದು ರಾಜ್ಯ ಬಿಜೆಪಿ ಆಸ್ಪತ್ರೆಯ ಮೂಲ ಉಲ್ಲೇಖಿಸಿ ಪ್ರಕಟಣೆ ನೀಡಿತ್ತು.

ಆದರೆ ಚಿಕಿತ್ಸೆ ಫಲಿಸದೇ ಗಸ್ತಿ ರಾತ್ರಿ 10.31ಕ್ಕೆ ನಿಧನರಾದ ಸಂಗತಿ ಖಚಿತಪಟ್ಟಿದೆ. ಕೊವಿಡ್ ಮತ್ತು ನ್ಯೂಮೊನಿಯಾ ಕಾರಣದಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಹುಅಂಗಾಂಗ ವೈಫಲ್ಯದ ಕಾರಣದಿಂದ ಅವರ ಸ್ಥಿತಿ ಗಂಭೀರವಾಗಿತ್ತು. ಕೊವಿಡ್ ಸಾಂಕ್ರಾಮಿಕದ ಕಾರಣದಿಂದ ಕಲಾಪ ನಡೆಯದ ಕಾರಣ ಗಸ್ತಿ ಒಂದೂ ಕಲಾಪಕ್ಕೆ ಹಾಜರಾಗುವುದು ಸಾಧ್ಯವಾಗಲಿಲ್ಲ. ಈಗ ಕಲಾಪ ಆರಂಭಕ್ಕೂ ಮುನ್ನವೇ ಅವರು ಆಸ್ಪತ್ರೆ ಸೇರಿದ್ದರು.

ರಾಯಚೂರಿನ ಅಶೋಕ್ ಗಸ್ತಿಯವರು ಬಿಜೆಪಿ ಸಂಘಟನೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಪರಿಣಾಮ ಅವರನ್ನು ರಾಜ್ಯಸಭೆಗೆ ಬಿಜೆಪಿ ಕಳಿಸಿತ್ತು. ಗಸ್ತಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಗಸ್ತಿ ನಿಧನಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ಹಲವಾರು ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here