ಗದಗ ಜಿಲ್ಲೆಯಲ್ಲಿ ಮಂಗಳವಾರ 39 ಜನರಿಗೆ ಸೋಂಕು; 129 ಜನರು ಗುಣಮುಖ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಮಂಗಳವಾರ ದಿ 15 ರಂದು 39 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

39 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7692 ಕ್ಕೇರಿದೆ. ಮಂಗಳವಾರ 129 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 6582 ಜನ ಗುಣಮುಖರಾಗಿದ್ದಾರೆ. 999 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮಂಗಳವಾರದ ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 111 ಕ್ಕೇರಿದೆ.

ಗದಗ-12, ಮುಂಡರಗಿ-05, ನರಗುಂದ-05, ರೋಣ-11, ಶಿರಹಟ್ಟಿ-05, ಹೊರ ಜಿಲ್ಲೆಯ 01 ಪ್ರಕರಣ ಸೇರಿದಂತೆ ಒಟ್ಟು 39 ಜನರಿಗೆ ಸೋಂಕು ದೃಢಪಟ್ಟಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಹುಡ್ಕೋ ಕಾಲೋನಿ, ಬ್ಯಾಂಕರ್ಸ್ ಕಾಲೋನಿ, ಜಿಮ್ಸ್, ಭೂಮರೆಡ್ಡಿ ವೃತ್ತ, ಕಳಸಾಪುರ ರಸ್ತೆ, ಶಿವಾನಂದ ನಗರ, ಮುಳಗುಂದ ರಸ್ತೆ,

ಗದಗ ತಾಲೂಕಿನ ಕಳಸಾಪುರ, ಚಿಕ್ಕ ಹಂದಿಗೋಳ, ನಾಗಾವಿ ತಾಂಡೆ, ಹೊಂಬಳ

ಮುಂಡರಗಿ ಪಟ್ಟಣದ ಬಸ ನಿಲ್ದಾಣದ ಹತ್ತಿರ, ಮುಂಡರಗಿ ತಾಲೂಕಿನ ಚುರ್ಚಿಹಾಳ, ಹಾರೋಗೆರಿ,

ನರಗುಂದ ತಾಲೂಕಿನ ಸೋಮಾಪುರ, ಕೊಣ್ಣೂರ, ಸುರಕೋಡ,

ರೋಣ ಪಟ್ಟಣದ ವೀರಾಪುರ ಓಣಿ, ವಿವೇಕಾನಂದ ನಗರ, ರೋಣ ತಾಲೂಕಿನ ಅಬ್ಬಿಗೇರಿ, ನರೇಗಲ್, ಇಟಗಿ, ಯಾವಗಲ್, ಸವಡಿ,

ಶಿರಹಟ್ಟಿ ತಾಲೂಕಿನ ಹರಿಪುರ, ಬನ್ನಿಕೊಪ್ಪ, ಲಕ್ಷ್ಮೇಶ್ವರ, ಶಿಗ್ಲಿ,


Spread the love

LEAVE A REPLY

Please enter your comment!
Please enter your name here