ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಭಾರಿ ಗಾತ್ರದ ಚಲಿಸುವ ಲಾರಿಯಡಿ ಜಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗನ ಮುಳಗುಂದನಾಕಾದಲ್ಲಿ ರಾತ್ರಿ ನಡೆದಿದೆ.
ಮಧ್ಯರಾತ್ರಿ ನಡೆದ ಈ ದುರ್ಘಟನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ವಿಳಾಸ ಪೊಲೀಸರಿಗೆ ಇನ್ನೂ ತಿಳಿದು ಬಂದಿಲ್ಲ.
ಸ್ಥಳೀಯರು ಹಾಗೂ ಪೊಲೀಸರು ಹೇಳುವ ಪ್ರಕಾರ ಈ ಯುವಕ ಕೆಇಬಿ ಕಚೇರಿಯ ರಸ್ತೆಯಿಂದ ಆಗಮಿಸಿ ನಾಕಾದಲ್ಲಿ ಡಿವೈಡರ್ ಮೇಲೆ ನಿಂತು ಲಾರಿ ಬಂದಿದ್ದು ನೋಡಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
![](http://vijayasakshi.com/wp-content/uploads/2020/11/img-20201121-wa00198506063010906855543.jpg)
ಸುದ್ದಿ ತಿಳಿದ ಟ್ರಾಫಿಕ್ ಪಿಎಸ್ಐ ಕಮಲಾ ದೊಡ್ಡಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಾರಿಗಾಗಿ ಶೋಧ ನಡೆಸಿದ್ದಾರೆ.