ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸುದ್ದಿ ಬಿಜೆಪಿ ವರಿಷ್ಠರಿಂದ ಬರಲಿದ್ದು, ದೂರವಾಣಿ ಕರೆಗಾಗಿ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ.
ಸಚಿವ ಸ್ಥಾನ ನಿರೀಕ್ಷೆ ಹೆಚ್ಚಾಗಿರುವ ಬಹುತೇಕ ಶಾಸಕರು ಎರಡು ದಿನಗಳಿಂದ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದು, ಫೋನ್ ಕಾಲ್ ಗಾಗಿ ಕಾತರರಾಗಿದ್ದಾರೆ.
ಕೆ.ಎಸ್. ಈಶ್ವರಪ್ಪ, ನಿರಾಣಿ, ಅರವಿಂದ ಲಿಂಬಾವಳಿ, ಪೂರ್ಣಿಮಾ ಶ್ರೀನಿವಾಸ, ಹಾಲಪ್ಪ ಆಚಾರ, ಸುನಿಲಕುಮಾರ್, ಶ್ರೀರಾಮುಲು, ಮುನಿರತ್ನ, ಆನಂದ ಸಿಂಗ, ಎಸ್. ಅಂಗಾರ, ಗೋಪಾಲಯ್ಯ, ಗೋವಿಂದ ಕಾರಜೋಳ, ಉಮೇಶ ಕತ್ತಿ, ಆರ್.ಅಶೋಕ, ಡಾ.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ ಸೇರಿ 28 ಶಾಸಕರಿಗೆ ಸಿಎಂ ಕಚೇರಿಯಿಂದ ಕರೆ ಬಂದಿದೆ ಎಂದು ಹೇಳಲಾಗುತ್ತದೆ.
ನಿನ್ನೆ ರಾತ್ರಿಯಿಂದಲೇ ಆಕಾಂಕ್ಷಿಗಳು ಪಟ್ಟಿಯಲ್ಲಿ ತಮ್ಮ ಹೆಸರಿದೆಯಾ ? ಎಂದು ತಿಳಿದುಕೊಳ್ಳಲು ಎಲ್ಲ ಮೂಲಗಳಿಂದ ಕೆಲ ಶಾಸಕರು ತಡಕಾಡುತ್ತಿದ್ದಾರೆ. ಒಬ್ಬರಿಗೊಬ್ಬರು ಕರೆ ಮಾಡಿ ನಿಮಗೇನಾದರೂ ಶುಭ ಸಮಾಚಾರ ಬಂತಾ ಎಂದು ಪರಸ್ಪರ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಒಟ್ಟಾರೆ ಸಂಪುಟ ವಿಸ್ತರಣೆ, ಕ್ರಿಕೆಟ್ ನ ಕೊನೆಯ ಓವರ್ ಕ್ಲೈಮಾಕ್ಸ್ ರೀತಿಯಲ್ಲಿ ತುದಿಗಾಲ ಮೇಲೆ ನಿಂತಿದ್ದಾರೆ.