22.8 C
Gadag
Saturday, December 9, 2023

ಡಿಕೆಶಿಗೆ ಜನ ಬೆಂಬಲವಿಲ್ಲ, ಸಿದ್ರಾಮಯ್ಯನವರೇ ಅವರ ಕಾರ್ಯಶೈಲಿ ಒಪ್ಪುತ್ತಿಲ್ಲ: ಸಂಸದೆ ಶೋಭಾ

Spread the love

ವಿಜಯಸಾಕ್ಷಿ ಸುದ್ದಿ, ಮಂಗಳೂರು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೋತು, ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಹಾಗಾಗಿ ಡಿಕೆಶಿ ಸಿದ್ದರಾಮಯ್ಯ ಆತಂಕಗೊಂಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಕಾಂಗ್ರೆಸ್ ನಾಯಕರನ್ನು ಕುಟಕಿದರು.

ಮಂಗಳೂರಿನಲ್ಲಿ ಈ ಮೇಲಿನಂತೆ ಹೇಳಿದ ಅವರು, ಕೊರೊನಾದಂತಹ ಸಂದಿಗ್ದ ಸ್ಥಿತಿಯಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿದ್ದರೂ ಕಾಂಗ್ರೆಸ್ ಅನಾವಶ್ಯಕವಾದ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.

ಡಿಕೆಶಿ ಬಿಜೆಪಿ ಯಾತ್ರೆ ಅನುಸರಿಸೋಕೆ ಹೋಗಿದ್ದಾರೆ. ಅವರಿಗೆ
ಜನಬೆಂಬಲ‌ವಿಲ್ಲ. ಸಿದ್ದರಾಮಯ್ಯನವರೇ ಡಿಕೆಶಿ ಕಾರ್ಯಶೈಲಿ ಒಪ್ಪುತ್ತಿಲ್ಲ.
ಕಾಂಗ್ರೆಸ್ ನಲ್ಲಿ ಗೊಂದಲವಿದ್ದು,
ಗೊಂದಲ ಮರೆಮಾಚಲು ಬಿಜೆಪಿ ಮೇಲೆ ಅನಗತ್ಯ ಆರೋಪ ಮಾಡುತ್ತಿದೆ ಎಂದು ದೂರಿದರು.

ಸಿದ್ದರಾಮಯ್ಯ ಗೋಮಾಂಸ ಸೇವನೆ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದರು, ಒಂದು ಸಮುದಾಯವನ್ನು ಓಲೈಸಲು ಸಿದ್ದರಾಮಯ್ಯ ಪ್ರಯತ್ನ ಪಡುತ್ತಿದ್ದು, ನಾಟಕವಾಡುತ್ತಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ಗೊಂದಲದಲ್ಲಿದ್ದಾರೆ ಎಂದು
ಹೇಳಿದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts